ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾರತದ ಚುನಾವಣಾ ಆಯೋಗ – ಪ್ರಜಾಕೀಯ

 ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು.

ರಾಜ್ಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳನ್ವಯ ರಾಜ್ಯದಲ್ಲಿನ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಸಲುವಾಗಿ ದಿನಾಂಕ: 26-05-1993 ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯ ಚುನಾವಣಾ ಆಯೋಗವನ್ನು ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್‍ಎ) ರಡಿಯಲ್ಲಿ ರಚಿಸಲಾಗಿದೆ.

ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್‍ಎ) ರಡಿಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರ ಮತ್ತು ಕಾರ್ಯಗಳು ಭಾರತ ಚುನಾವಣಾ ಆಯೋಗಕ್ಕೆ ಅನುಚ್ಛೇದ 324 ರಡಿಯಲ್ಲಿ ನಿಹಿತವಾಗಿರುವಂತೆ ಅವರವರ ಕಾರ್ಯ ಕ್ಷೇತ್ರದಲ್ಲಿ ಒಂದೇ ರೀತಿಯಿರುತ್ತದೆ.

ರಾಜ್ಯ ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಮತ್ತು ನಾಲ್ಕು ಹಂತದ ನಗರ ಸ್ಥಳೀಯ ಸಂಸ್ಥೆ ಅಂದರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯನ್ನು ನಡೆಸುತ್ತದೆ.

ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣದಲ್ಲಿ ನಡೆಸಲು ಅಧಿಕಾರವನ್ನು ನೀಡಲಾಗಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇದ) ಅಧಿನಿಯಮ 1987 ರನ್ವಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮೇಲೆ ಸಲ್ಲಿಸಿದ ದೂರುಗಳನ್ನು ವಿಚಾರಣೆ ನಡೆಸಿ, ಸೂಕ್ತವೆನಿಸಿದಲ್ಲಿ ರಾಜಕೀಯ ಪಕ್ಷಗಳ ಸದಸ್ಯರುಗಳನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಗಳನ್ನು ಹೊರಡಿಸಬಹುದಾಗಿರುತ್ತದೆ.

  ಭಾರತದಲ್ಲಿ ಗೋಡೆಗಳು ಮತ್ತು ನೆಲದ ಮೇಲೆ ಸಗಣಿಯನ್ನು ಏಕೆ ಬಳಸುತ್ತಾರೆ ?

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗಳು ಅವರ ವೆಚ್ಚ ವಿವರ ಸಲ್ಲಿಸದಿದ್ದಲ್ಲಿ / ಸಲ್ಲಿಸಲು ವಿಳಂಬವಾದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸುವ ಅಧಿಕಾರವನ್ನು ಕೊಡಲಾಗಿದೆ. ಮುಂದುವರೆದು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಅವರ ವಾರ್ಷಿಕ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಸಲ್ಲಿಸದಿದ್ದಲ್ಲಿ ಅಥವಾ ತಪ್ಪು ವಿವರಗಳನ್ನು ಸಲ್ಲಿಸಿದಲ್ಲಿ, ಅವರನ್ನು ಅನರ್ಹಗೊಳಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗಿದೆ

ಚುನಾವಣಾ ಆಯೋಗವನ್ನು 1950 ರ ಜನವರಿ 25 ರಂದು ರಚಿಸಲಾಯಿತು. ಈ ಆಯೋಗವು 2010 ಜನವರಿ 25 ಕ್ಕೆ 60 ವಸಂತಗಳನ್ನು ಪೂರೈಸಿದೆ.

➤ ಉದ್ದೇಶ  –    ಪ್ರಜಾಪ್ರಭುತ್ವ ಸರ್ಕಾರದಲ್ಲಿ

ಉದ್ದೇಶ  –    ಪ್ರಜಾಪ್ರಭುತ್ವ ಸರ್ಕಾರದಲ್ಲಿ ಜನರಿಂದ ನೇರವಾಗಿ ಸಮರ್ಥವಾದ ಜನ ನಾಯಕನನ್ನು ನ್ಯಾಯಬದ್ದವಾಗಿ ಚುನಾವಣೆಯ ಮೂಲಕ ಅಯ್ಕೆ ಮಾಡುವದಾಗಿದೆ.

➤  ಭಾರತ ಸಂವಿಧಾನದ 15 ನೇ ಭಾಗದ 324 ನೇ ವಿಧಿಯಿಂದ 329 ರವರೆಗಿನ ವಿಧಿಗಳು ಚುನಾವಣಾ ಆಯೋಗದ ಬಗ್ಗೆ ತಿಳಿಸುತ್ತವೆ.

* ಅನುಚ್ಛೇಧ : 324 – ಚುನಾವಣೆಗಳ ಮೇಲ್ವಿವಾರಣೆ, ನಿರ್ದೇಶನ, ನಿಯಂತ್ರಣ ಮತ್ತು ಜವಾಬ್ದಾರಿಗಳನ್ನು ಹೇಳುತ್ತದೆ.

  ಬ್ರಹ್ಮವೈವರ್ತ ಪುರಾಣ ಏನು ಹೇಳುತ್ತದೆ ?

* ಅನುಚ್ಛೇಧ :325  – ಮತದಾರರ ಪಟ್ಟಿಯಲ್ಲಿ ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ಹೆಸರನ್ನು ಸೇರಿಸಲು ನಿರಾಕರಿಸುವಂತಿಲ್ಲ.

* ಅನುಚ್ಛೇಧ :326  –ಮತದಾನವು ವಯಸ್ಕ ಮತಾಧಿಕಾರದ ಆಧಾರದ ಮೇಲೆ ನಡೆಯಬೇಕು.

* ಅನುಚ್ಛೇಧ : 327  – ವಿಧಾನ ಮಂಡಲಗಳ ಚುನಾವಣೆಗಳ ಬಗ್ಗೆ ಉಪಬಂಧ ರಚಿಸಲು ಸಂಸತ್ತಿನ ಅಧಿಕಾರವಿದೆ.

* ಅನುಚ್ಛೇಧ : 328  – ವಿಧಾನ ಮಂಡಲಗಳಚುನಾವಣೆಗೆ ಸಂಬಂಧಿಸಿದ ಉಪಬಂಧಗಳನ್ನು ರಾಜ್ಯ ವಿಧಾನ ಮಮಡಲಗಳು ರಚಿಸಿಕೊಳ್ಳುವ ಅಧಿಕಾರ.

* ಅನುಚ್ಛೇಧ : 329  –ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗದ ಕಾರ್ಯದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಪ್ರತಿಷೇಧ.

#   ಚುನಾವಣಾ ಆಯೋಗದ ರಚನೆ : 

➤ ಚುನಾವಣಾ ಆಯೋಗದಲ್ಲಿ 1989 ರ ವರೆಗೆ ಮುಖ್ಯ ಚುನಾವಣಾ ಆಯುಕ್ತರು ಮಾತ್ರ ಇದ್ದರು. ಬಳಿಕ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಯಿತು. ಆದರೆ 1990 ರಲ್ಲಿ ನೇಮಕಗೊಂಡ ಮುಖ್ಯ ಚುನಾವಣಾ ಅಧಿಕಾರಿ ‘ಟಿ. ಎನ್. ಶೇಷನ್‍ರವರ’ ನಿರಂಕುಶ ತಿರ್ಮಾನಗಳು ಬಹಳ ಚರ್ಚೆಗೆ ಗ್ರಾಸವಾದವು. ಈ ರೀತಿಯ ನಿರಂಕುಶ ನಿರ್ಧಾರದ ಅವಗಡಗಳನ್ನು ತಪ್ಪಿಸಲು ಸಂಸತ್ತಿನ ಜಂಟಿ ಸಮಿತಿ ಮತ್ತು ದೀನೇಸ ಗೋಸ್ವಾಮಿ ಸಮಿತಿ ಬಹು ಸದಸ್ಯ ಆಯೋಗದ ರಚನೆಗೆ ಶಿಫಾರಸ್ಸು ಮಾಡಿತು.

➤  ಈ ನಿರಂಕುಶ ಅಧಿಕಾರಕ್ಕೆ ಕಡಿವಾಣ ಹಾಕಲು ಪಿ. ವಿ ನರಸಿಂಹರಾವ್ ಸರ್ಕಾರ 1993 ಅಕ್ಟೋಬರ್ 1 ರಂದು ಬಹು ಚುನಾವಣಾ ಅಧಿಕಾರಿಯ ಆಯೋಗವನ್ನು ಸುಗ್ರಿವಾಜ್ಞೆಯ ಮೂಲಕ ರಚಿಸಿತು. ಡಿಸೆಂಬರ್ 20, 1993ರಲ್ಲಿ ಸಂಸತ್ತು ಸುಗ್ರಿವಾಜ್ಞೆಗೆ ಒಪ್ಪಿಗೆ ನೀಡಿತು.

  PRAJAAKEEYA - ಪ್ರಜಾಕೀಯ

➤  ಚುನಾವಣಾ ಆಯೋಗಕ್ಕೆ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.

➤ ಚುನಾವಣಾ ಆಯುಕ್ತರಿಗೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾದೀಶರ ಸ್ಥಾನಮಾನ ನೀಡಲಾಗಿದ್ದು. ನ್ಯಾಐಆದೀಶರಿಗೆ ದೊರೆಯುವ ವೇತನ, ಪಿಂಚಣಿ ಮತ್ತು ಇತರೆ ಸೌಲಭ್ಯಗಳು ಚುನಾವಣಾ ಆಯುಕ್ತರಿಗೂ ಲಭಿಸುತ್ತವೆ.

➤  ಚುನಾವಣಾ ಆಯುಕ್ತರ ಅಧಿಕಾರದ ಅವಧಿ 6 ವರ್ಷ ಅಥವಾ 65 ವರ್ಷವಯಸ್ಸಿನವರೆ ಈ ಎರಡರಲ್ಲಿ ಯಾವುದು ಬೇಗ ಅಂತ್ಯವಾಗುವುದೋ ಅದಕ್ಕನುಸಾರವಾಗಿ ಪದತ್ಯಾಗ ಮಾಡಬೇಕು.

➤  ಸಂವಿಧಾನದ 324 (5) ನೇ ಉಪವಿಧಿಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಯನ್ನು ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರ ಪದಚ್ಯುತಿ ಮಾದರಿಯಂತೆ ಮಾಡಲಾಗುತ್ತದೆ. ಅಂದರೆ ಮುಖ್ಯ ಚುನಾವಣಾ ಆಯುಕ್ತರು ವರ್ತನೆ ಅನುಚಿತವಾಗಿರುವುದು ಸಾಬೀತಾದರೆ, ಅವರ ವಿರುದ್ದ ಸಂಸತ್ತಿನಲ್ಲಿ ಬಹುಮತದೊಂದಿಗೆ ನಿರ್ಣಯ ಅಂಗೀಕರಿಸಿ ಹುದ್ದೆಯಿಂದ ತೆಗೆದು ಹಾಕಬಹುದು. ಅದೇ ರೀತಿ ಉಳಿದ ಇಬ್ಬರು ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಅವರು ವಜಾ ಮಾಡಬಹುದು.

Leave a Reply

Your email address will not be published. Required fields are marked *

Translate »