ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಊಟದ ಪ್ರಭಾವ ಜೀವನದ ಮೇಲೆ

ಊಟದ ಪ್ರಭಾವ ಜೀವನದ ಮೇಲೆ

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರ ಮಾತ್ರ ಅಲ್ಲ, ಸಂತಸದಿಂದ ತಯಾರಿಸಿದ,ಮತ್ತು ದೇವರಿಗೆ ಸಮರ್ಪಿಸಿದ ‌ಅನ್ನ.
ನಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ, BOTH PHYSICAL & MENTAL CHANGES

ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ. ಆದ್ದರಿಂದ ಅಡುಗೆ
ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವು ದು, ಚೀರಾಡುವುದು ಸರಿಯಲ್ಲ (ಇದಂತೂ ಈಗ ಸರ್ವೇ ಸಾಮಾನ್ಯ ಆಗಿದೆ)
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ
NEGETIVE VIBRATIONS ಹೋಗುವುದು ತುಂಬಿಕೊಳ್ಳುತ್ತದೆ
ನೆನಪಿಡಿ ನಾವು ಅದನ್ನೇ ಉಣ್ಣುವುದು
ಅದಕ್ಕೆ ನಮ್ಮ ಸಂಪ್ರದಾಯದಲ್ಲಿ, ಆಚರಣೆಗಳಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ, ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ರೂಢಿ, ಇಂದಿಗೂ ಗುಡಿ , ಮಠದ ದಾಸೋಹಗಳಲ್ಲಿ ಕಾಣುವುದುಂಟು.

ಅಡುಗೆ ಮತ್ತು ಊಟದಲ್ಲಿ ಮೂರು ತರಹ.

1. ಹೋಟೆಲ್ ಪಾರ್ಟಿಗಳಲ್ಲಿನ ಊಟ

2.ಮನೆಯಲ್ಲಿ ತಾಯಿ, ಪತ್ನಿ ಮಾಡುವ ಅಡುಗೆ, ಊಟ.

3.ಮಂದಿರ, ಮಠಗಳಲ್ಲಿ ಮಾಡುವ ಅಡುಗೆ, ಊಟ.

ಈ ಮೇಲಿನ ಮೂರು ಪ್ರಕಾರದ ಊಟದಲ್ಲಿ ಬೇರೆ ಬೇರೆ ತರಹದ ಸ್ಪಂದನೆಗಳು ಇರುತ್ತವೆ.

  ಹೃದಯಾಘಾತಕ್ಕೆ ಮೂರೂವರೆ ನಿಮಿಷದ ಸಲಹೆ

ಹೋಟೆಲ್ ಊಟ
ಇಲ್ಲಿ ಯಾವುದೇ POSITIVE vibrations ಇರುವುದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ,ವ್ಯಾಪಾರಕ್ಕಾಗಿಮಾಡಿದ ಅಡುಗೆ ಅದು, ಯಾರು ಅಡುಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹ ಇರುವವೋ ಗೊತ್ತಿಲ್ಲ,
ಅಂತಹವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡುಗೆಯಲ್ಲಿ ಇಳಿಯುವವು.

ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡುಗೆ…

ಇಲ್ಲಿ ಮಾಡುವ ಅಡು ಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಇದೇ ಪಾಸಿಟಿವ್ ಸ್ಪಂದನೆಗಳು ಇರುವ ಅಡುಗೆ.

ಆದರೆ ಇತ್ತೀಚಿಗೆ ಮನೆಯಲ್ಲಿ
ಅಡುಗೆ ಕೆಲಸದವಳು ಅಡು ಗೆ ಮಾಡುವುದು fashion ಆಗಿದೆ.
ಮನೆಯಲ್ಲಿ ಒಂದಿಬ್ಬರೆ ಇದ್ದರೂ ಸಹ ಅಡುಗೆ ಮಾಡುವುದು, ಅಡುಗೆ ಕೆಲಸದವಳೆ,
ಹಾಗಾಗಿ ಅವಳ ಮನಸ್ಸು ಯಾವ ತರಹ ಇರುತ್ತೋ ಗೊತ್ತಿಲ್ಲ. ಅವಳು ಸಿಡುಕುತ್ತಾ,ಒಳಗೊಳಗೇ ಹೇಗೇಗೋ ಕುದಿಯುತ್ತಾ, ಆತುರದಿಂದ,
ಆತಂಕದಿಂದ,ಬೇಸರದಿಂದ, ದುಡ್ಡಿಗೆ ಮಾತ್ರ ಅಡುಗೆ ಮಾಡುವಳು. ಹಾಗಾಗಿ ಅಲ್ಲಿಯೂ
ನೆಗೆಟಿವ್ vibration ಇರುವುದು.
ಅಂತಹ ಅಡುಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ.
ಸ್ವಲ್ಪ ವಿಚಾರ ಮಾಡಿ ನೋಡಿ.

  ಕೆಮ್ಮು ಮತ್ತು ನೆಗಡಿ cold cough home medicine

ನಮ್ಮ ಮನೆಯ ಅಜ್ಜಿ , ತಾಯಿ,ಹಾಗೂ ಜೀವನ ಸಂಗಾತಿಗಳು ಮಾಡಿದ
ಅಡುಗೆ ಮತ್ತು ಕೆಲಸದವಳು ಮಾಡುವ ಅಡುಗೆಗೆ ಎಷ್ಟು ‌ವ್ಯತ್ಯಾಸ ?
ತಾಯಿ ಅಡುಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಕೆಲಸದವಳಿಗೆ, ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ, ಏರಿಳಿತ ಉಂಟಾಗುತ್ತದೆ.

ಮಂದಿರ ಮಠಗಳಲ್ಲಿನ ಅಡುಗೆ….

ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡುಗೆ, ಅದು ನಾವು ಉಣ್ಣುವುದು ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡುಗೆಯಲ್ಲಿ ಪಾಸಿಟಿವ್ vibrations ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡುಗೆ ದೇವರಿಗೆ ಸಮರ್ಪಿಸಿ , .
ಅದರ ಸ್ವಲ್ಪ ಭಾಗ ಬಡವರಿಗೆ,ಬಂದವರಿಗೆ,
ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,
ನಮ್ಮ ಅಜ್ಜಿ, ನಮ್ಮ ತಾಯಂದಿರು ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ ಎಂದು ಕೊಡುವುದನ್ನು ನಾವು ಸಣ್ಣವರಿದ್ದಾಗ ನೋಡಿದ ನೆನಪಿದೆ.

  ಸೂರ್ಯನಾರಾಯಣನ ಆರಾಧನೆ

ಅನ್ನದಲ್ಲಿ ಜಾದು ಇದೆ,. ಅಡುಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿರಲಿ. ಮತ್ತು ಅಡುಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ,ಪ್ರಶಾಂತ ಮನಸಿರಲಿ
ಅಡುಗೆ ಆದ ಮೇಲೆ,ಅದನ್ನು ದೇವರಿಗೆ ಸಮರ್ಪಿಸಿ ಊಟ ಮಾಡಿ ನೋಡಿ. 3 ತಿಂಗಳು ಇದನ್ನು ಮಾಡಿ ನೋಡಿ.
ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.
ಶುಭವಾಗಲಿ.

ಓಂ ಶ್ರೀ ಅನ್ನಪೂರ್ಣೇಶ್ವರಿಯೇ ನಮಃ

ಶ್ರೀ ನೀಲಕಂಠ ಗುರೂಜಿ

Leave a Reply

Your email address will not be published. Required fields are marked *

Translate »