ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ಕ್ಷೇತ್ರ ಧರ್ಮಸ್ಥಳ – ದೇವಾಲಯದ ಇತಿಹಾಸ ಮತ್ತು ಮೂಲ

“ಶ್ರೀ ಕ್ಷೇತ್ರ ಧರ್ಮಸ್ಥಳ”

ಕರ್ನಾಟಕದಲ್ಲಿ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇಗುಲ ಎಂದರೆ ಅದು ಧರ್ಮಸ್ಥಳ. ಶಿವನನ್ನು ಆರಾಧಿಸುವ ಈ ಪವಿತ್ರ ಸ್ಥಳದಲ್ಲಿ ಪರಶಿವನೇ ನೆಲೆಸಿದ್ದಾನೆ, ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರೆ ಜೀವನದಲ್ಲಿ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ. ಮುಂದಿನ ಜೀವನದಲ್ಲಿ ಸಕಾರಾತ್ಮಕ ಅಂಶಗಳೇ ಇರುತ್ತದೆ. ತೊಂದರೆಗಳೆಲ್ಲವೂ ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬುಗೆ. ಧರ್ಮಸ್ಥಳ ಎಂದರೆ ಧರ್ಮವು ನೆಲಸಿರುವ ಸ್ಥಳ ಎಂಬುದು ಭಕ್ತರ ನಂಬಿಕೆ.

ಶಿವನನ್ನು ಅತ್ಯಂತ ಧಾರ್ಮಿಕವಾಗಿ ಪೂಜಿಸುವ ಸ್ಥಳ ಇದಾಗಿದ್ದು, ರಾಜ್ಯದ ಅತ್ಯಂತ ಪುರಾತನ ದೇವಳವೂ ಹೌದು. ಜೈನ ಬಂಟ ಸಮುದಾಯವು ಈ ದೇಗುಲವನ್ನು ಆರಂಭಿಸಿದ್ದು, ಈಗ ಹೆಗ್ಗಡೆ ಅವರ ಕುಟುಂಬವು ಈ ದೇವಸ್ಥಾನವನ್ನು ನಿರ್ವಹಿಸುತ್ತಿದೆ. ವೈಷ್ಣವ ಪೂಜಾರಿಗಳು ಶಿವನನ್ನು ಇಲ್ಲಿ ಪೂಜಿಸುವುದರಿಂದ ಇದು ಶಿವನ ಅಚ್ಚುಮೆಚ್ಚಿನ ಸ್ಥಳ ಎಂಬುದೂ ಭಕ್ತರ ನಂಬಿಕೆ.

​ನೇತ್ರಾವತಿ ನದಿಯ ದಡದಲ್ಲಿ:

ಧರ್ಮಸ್ಥಳ ದೇಗುಲವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಇದನ್ನು ಶ್ರೀ ಮಂಜುನಾಥನ ಆವಾಸ ಸ್ಥಾನ ಎಂದು ನಂಬಲಾಗಿದೆ. ಈ ಪವಿತ್ರ ದೇಗುಲವು ನೇತ್ರಾವತಿ ನದಿ ದಂಡೆಯಲ್ಲಿದೆ. ಇದು ಶಿವನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದು ಭಕ್ತರು ನಂಬಿದ್ದಾರೆ. ಅಷ್ಟು ಮಾತ್ರವಲ್ಲ, ಶಿವ ಭಕ್ತರ ನೆಚ್ಚಿನ ಸ್ಥಳವೂ ಇದಾಗಿದೆ. ಇಲ್ಲಿಗೆ ಭೇಟಿ ನೀಡದ ಜನರೇ ಇಲ್ಲ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆ ಧರ್ಮಸ್ಥಳದ ಮಂಜುನಾಥನನ್ನು ನೋಡುವ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ.

  ತಿರುವನಂತಪುರಂನ ಶ್ರೀಕಂಠೇಶ್ವರಂ ದೇವಸ್ಥಾನ

​ಪ್ರಪಂಚದ ಅಪರೂಪದ ಶಿವದೇಗುಲ:

ಧರ್ಮಸ್ಥಳದ ಮುಖ್ಯ ದೇಗುಲದಲ್ಲಿ ಶ್ರೀ ಮಂಜುನಾಥನನ್ನು ಶಿವನ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇಗಲುದಲ್ಲಿ ಸ್ವಾಮಿ ಮಂಜುನಾಥನೊಂದಿಗೆ ಅಮ್ಮನವರು, ಚಂದ್ರನಾಥ ಮತ್ತು ಧರ್ಮ ದೈವಗಳನ್ನು ಆರಾಧಿಸಲಾಗುತ್ತದೆ. ಈ ದೇವಾಲಯಕ್ಕೆ ಕಾಲಿಡುತ್ತಿದ್ದಂತೆ ಅದಾವುದೇ ದೈವಿಕ ಶಕ್ತಿ ನಮ್ಮನ್ನು ಆಶೀರ್ವದಿಸುತ್ತಿದೆ ಎಂಬಂತೆ ಭಾಸವಾಗುತ್ತದೆ. ಸಕಾರಾತ್ಮಕ ಭಾವಗಳು, ಶಕ್ತಿಗಳು ನಮ್ಮಲ್ಲಿ ಹರಿಯಲು ಆರಂಭವಾಗುತ್ತದೆ. ಇದೇ ಈ ಕ್ಷೇತ್ರದ ಮಹಿಮೆ.

ದೇವಾಲಯದ ಬಗ್ಗೆ ಒಂದು ವಿಶೇಷ ಸಂಗತಿಯೆಂದರೆ ಅದರ ಧಾರ್ಮಿಕ ಸಹಿಷ್ಣುತೆ ಮತ್ತು ಪೂಜಾ ವಿಧಾನಗಳು. ಇದು ಭೂಮಿಯ ಮೇಲಿನ ಅಪರೂಪದ ಶಿವ ದೇವಾಲಯವಾಗಿದ್ದು, ಅಲ್ಲಿ ವೈಷ್ಣವ ಪುರೋಹಿತರು ದೈನಂದಿನ ಪೂಜೆಯನ್ನು ನೋಡಿಕೊಳ್ಳುತ್ತಾರೆ. ಮತ್ತೊಂದೆಡೆ, ದೇವಾಲಯದ ಆಡಳಿತಗಾರರಾಗಿ ಕಾರ್ಯನಿರ್ವಹಿಸುವ ಜೈನರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಾರೆ.

ಜೈನ ತೀರ್ಥಂಕರರ ಆರಾಧನೆ:

ಧರ್ಮಸ್ಥಳ ಮಂಜುನಾಥ ದೇವಾಲಯದ ಮತ್ತೊಂದು ಅದ್ಭುತ ಸಂಗತಿಯೆಂದರೆ ಜೈನ ಮತ್ತು ಹಿಂದೂ ಧರ್ಮದ ಸಂಯೋಜನೆ. ಧರ್ಮಸ್ಥಳದ ಆರಾಧ್ಯ ದೈವವಾದ ಮಂಜುನಾಥನ ಪಕ್ಕದಲ್ಲೇ ಜೈನ ತೀರ್ಥಂಕರನನ್ನು ಪೂಜಿಸಲಾಗುತ್ತದೆ. ಇದು ಭಕ್ತಿ ಮತ್ತು ಧಾರ್ಮಿಕ ಸಂಯೋಜನೆಯ ಸಾಕ್ಷಿರೂಪವೂ ಆಗಿದೆ.

​ಧರ್ಮಸ್ಥಳವನ್ನು ಈ ಹಿಂದೆ ಕಡುಮಾ ಎಂದು ಕರೆಯಲಾಗುತ್ತಿತ್ತು:

ದೇವಾಲಯದ ಇತಿಹಾಸ ಮತ್ತು ಮೂಲದ ಬಗ್ಗೆ ಕೆಲವು ಮಾತುಗಳನ್ನು ಹೇಳುವುದಾದರೆ, ಇದು 800 ವರ್ಷಗಳ ಹಿಂದಿನದು. ಅಣ್ಣಪ್ಪ ಎಂಬ ಹೆಸರಿನ ಮಹಾನ್ ಶಕ್ತಿ ಹೊಂದಿರುವ ಸ್ಥಳೀಯ ವ್ಯಕ್ತಿಯಿಂದ ಶಿವಲಿಂಗವನ್ನು ಧರ್ಮಸ್ಥಳಕ್ಕೆ ಕರೆತರಲಾಯಿತು ಎಂದು ಹೇಳಲಾಗುತ್ತದೆ. ಕೆಲವು ಶತಮಾನಗಳ ಹಿಂದೆ ಧರ್ಮಸ್ಥಳವನ್ನು ಕಡುಮಾ ಎಂದು ಕರೆಯಲಾಗುತ್ತಿತ್ತು.

  ಶ್ರೀ ಕೊತ್ತಲೇಶ ದೇವಸ್ಥಾನ ಬಾಗಲಕೋಟೆ

ಚಾಲ್ತಿಯಲ್ಲಿರುವ ದಂತಕಥೆಯ ಪ್ರಕಾರ ಜೈನ ಧರ್ಮದ ಮುಖ್ಯಸ್ಥ ಬಿರ್ಮಣ್ಣ ಪೆರ್ಗಡೆ ಮತ್ತು ಅವರ ಪತ್ನಿ ಅಮ್ಮು ಬಲ್ಲತಿ ಅವರು ನೆಲ್ಲಾಡಿ ಬೀಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದರು. ಪೆರ್ಗಡೆ ಅವರ ಕನಸಿನಲ್ಲಿ ಧರ್ಮ ದೈವಗಳು ಕಾಣಿಸಿಕೊಂಡರು ಮತ್ತು ನೆಲ್ಲಾಡಿ ಬೀಡುವಿನಲ್ಲಿ ಧರ್ಮ ದೈವಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ಪೆರ್ಗಡೆ ಅವರು ಅದರಂತೆ ನ್ಯಾಯದೇವತೆಗಳಾದ ಕಾಳರಾಹು, ಕಾಳಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯನ್ನು ಸ್ಥಾಪಿಸಿದರು.

ಪೆರ್ಗಡೆ ಅವರು ನ್ಯಾಯ ದೇವತೆಗಳನ್ನು ಸ್ಥಾಪಿಸಿದ ದಿನದಿಂದ ಕಡುಮಾ ಧರ್ಮ ಕ್ಷೇತ್ರ ಮತ್ತು ನಾಲ್ಕು ಧರ್ಮ ದೈವಗಳ ವಾಸಸ್ಥಾನವಾಗುತ್ತದೆ. ಪೆರ್ಗಡೆ ಅವರು ಧರ್ಮ ದೈವಗಳಿಗೆ ವಿಧಿವಿಧಾನದಂತೆ ಪೂಜೆ ಮಾಡಲು ಬ್ರಾಹ್ಮಣ ಅರ್ಚಕರನ್ನು ಆಹ್ವಾನಿಸುವ ದಿನ ಬರುತ್ತದೆ. ಈ ಅರ್ಚಕರು ಸ್ಥಳೀಯ ದೈವಗಳ ಪಕ್ಕದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಪೆರ್ಗಡೆ ಅವರಿಗೆ ವಿನಂತಿಸುತ್ತಾರೆ. ಲಿಂಗವನ್ನು ಹುಡುಕುವಾಗ, ದೈವಗಳು ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ (ಮಂಗಳೂರು) ಲಿಂಗವನ್ನು ತರಲು ವತ್ಸಲ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ, ಲಿಂಗದ ಸುತ್ತಲೂ ದೇವಾಲಯವನ್ನು ನಿರ್ಮಿಸಲಾಯಿತು.

ಇಂದು ಧರ್ಮಸ್ಥಳವು ಪ್ರಪಂಚದ ಅತಿ ಹೆಚ್ಚು ಶಿವಭಕ್ತರು ಭೇಟಿ ನೀಡುವ ಪವಿತ್ರ ಸ್ಥಳ ಎಂದು ಹೆಸರಾಗಿದೆ. ಇಲ್ಲಿಗೆ ಪ್ರತಿದಿನ ಸರಿಸುಮಾರು 10 ಸಾವಿರ ಮಂದಿ ಭೇಟಿ ನೀಡುತ್ತಾರೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ಬೃಹತ್‌ ಅಡುಗೆ ಕೋಣೆ, ಊಟದ ಕೋಣೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರತಿದಿನ ಅನ್ನದಾನ ನಡೆಯುತ್ತದೆ. ಭೋಜನ ಕೋಣೆಯಲ್ಲಿ ಭಕ್ತರು ತಮಗೆ ತೃಪ್ತಿಯಾಗುವಷ್ಟು ಊಟ ಮಾಡಬಹುದು. ಇದು ದಕ್ಷಿಣ ಭಾರತದ ಬೃಹತ್‌ ಭೋಜನ ಕೋಣೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಜನರ ಊಟ ಮಾಡುತ್ತಾರೆ.

  ಕನ್ನಡ ನಾಣ್ಣುಡಿ ಗಾದೆಗಳ ಸಂಗ್ರಹ - ಭಾಗ ೬ - Proverb Collection

ಬಾಹುಬಲಿಯ ಪ್ರತಿಮೆ:

ಒಂದೇ ಬಂಡೆಯಿಂದ ಕೆತ್ತಿದ ಬಾಹುಬಲಿಯ ಪ್ರತಿಮೆಯನ್ನು ನಾವು ಧರ್ಮಸ್ಥಳದಲ್ಲಿ ನೋಡಬಹುದು. ಇದು ಸುಮಾರು 39 ಅಡಿ ಎತ್ತರವಾಗಿದ್ದು, ಇದನ್ನು ನೋಡಿದ ಎಂತವರೂ ಭಕ್ತಿಪರವಶರಾಗುತ್ತಾರೆ.

ಕಾರ್ತಿಕ ಮಾಸದ ವೇಳೆ ದೇವಾಲಯದಲ್ಲಿ ಲಕ್ಷ ದೀಪೋತ್ಸವವನ್ನು ಆಯೋಜಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ 100,000 ಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತದೆ. ಇದು ದೇವಾಲಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಅಲ್ಲದೆ, ಮಹಾ ಶಿವರಾತ್ರಿ ಮತ್ತು ಮಹಾಮಸ್ತಕಾಭಿಷೇಕವನ್ನು ಬಹಳ ವಿಜೃಂಭಣೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ.

ಧರ್ಮಸ್ಥಳ ದೇವಸ್ಥಾನದ ಸಮಯ:

ದರ್ಶನ ಮತ್ತು ಪೂಜೆ: ಬೆಳಗ್ಗೆ 6:30 ರಿಂದ 11:00 ರವರೆಗೆ

ಮಧ್ಯಾಹ್ನ 12:15 ರಿಂದ 2:30 ರವರೆಗೆ

ಸಂಜೆ 5-00 ರಿಂದ ರಾತ್ರಿ 8-30

ಅಭಿಷೇಕ ಮತ್ತು ಅರ್ಚನಾ: ಬೆಳಿಗ್ಗೆ 8-30 ರಿಂದ 10-30 ರವರೆಗೆ

ತುಲಾಭಾರ ಸೇವೆ: ಬೆಳಗ್ಗೆ 8:00 ಮತ್ತು ಮಧ್ಯಾಹ್ನ 01:00.

Leave a Reply

Your email address will not be published. Required fields are marked *

Translate »