ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನವರಾತ್ರಿ ಎನ್ನುವ ಆಯುರ್ವೇದ ಹಬ್ಬ

ನವರಾತ್ರಿ ಎನ್ನುವ ಆಯುರ್ವೇದ ಹಬ್ಬ..!

ನವರಾತ್ರಿಯು ನವದುರ್ಗೆಯರೊಂದಿಗೆ ಆಯುರ್ವೇದದ ಔಷಧಿಯ ಸೇವನೆಯ ಪರ್ವವೂ ಹೌದು.

ನಮ್ಮ ಋಷಿ ಮುನಿಗಳು ಈ ಋತು(ಕಾಲ)ವಿನಲ್ಲಿ ಸೇವಿಸಬೇಕಾದ ಕೆಲವು ಔಷಧಿಗಳನ್ನು ಉಲ್ಲೇಖಿಸಿದ್ದಾರೆ.

ಇವುಗಳನ್ನು ಪ್ರತ್ಯೇಕ ದಿನಗಳಲ್ಲಿ ಸೇವಿಸುವುದರಿಂದ ನಮ್ಮ ಶಾರೀರಕ, ಮಾನಸಿಕ ಕ್ಷಮತೆಯು ಹೆಚ್ಚಾಗಿ ನಾವು ನಮ್ಮ ಶಕ್ತಿ-ತೇಜಸ್ಸು-ಬಲ-ಬುದ್ಧಿಗಳನ್ನು ಸದೃಢಗೊಳಿಸಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ,ನಿರೋಗಿಗಳನ್ನಾಗಿಸಿ ದೀರ್ಘಕಾಲ ಸ್ವಸ್ಥ ಜೀವನ ನಡೆಸಲು ನೆರವಾಗುವ
ಒಂಬತ್ತು ತರದ ಈ ದಿವ್ಯ ಮಹೌಷಧಿಗಳು ನಿಸ್ಸಂದೇಹವಾಗಿ ಪ್ರಭಾವಶಾಲಿಗಳಾಗಿವೆ.

ಔಷಧ ರೂಪದಲ್ಲಿರುವ ಇವನ್ನು ಬರುವ ಚಳಿಗಾಲಕ್ಕೆ ಮುನ್ನುಡಿಯೆಂಬಂತೆ ಸ್ವೀಕರಿಸಬಹುದು.

ಈ ಔಷಧಗಳು-
1,ಹರಿದ್ರಾ.
2,ಬ್ರಾಹ್ಮೀ.
3,ಚಂದಸೂರ.
4,ಕೂಷ್ಮಾಂಡ.
5,ಅಲಸೀ.
6,ಮಾಚಿಕಾ.
7,ನಾಗದಾನ.
8,ತುಲಸೀ.
9,ಶತಾವರೀ.

1- ಪ್ರಥಮ-ಶೈಲಪುತ್ರೀ ಯಾ ಹರಿದ್ರಾ:ಅನೇಕ ಪ್ರಕಾರಗಳ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿರುವ ಮದ್ದಿನ ಗಣಿ.ಆಯುರ್ವೇದದ ಪ್ರಧಾನ ಔಷಧ. ಇದರಲ್ಲಿ ಏಳು ವಿಧಗಳಿವೆ.

  Kannada Movie Actor House Addresses & Location | ಕನ್ನಡ ಚಲನಚಿತ್ರ ನಟರ ಮನೆ ವಿಳಾಸ

2-ದ್ವಿತೀಯ- ಬ್ರಹ್ಮಚಾರಿಣೀ ಯಾ ಬ್ರಾಹ್ಮೀ(ಸರಸ್ವತೀ):ಇದು ಆಯುಸ್ಸು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವುದು.
ರಕ್ತವಿಕಾರಗಳನ್ನು ನಾಶ ಮಾಡುತ್ತದೆ.
ಸ್ವರಶುದ್ಧಿಗೆ ದಿವ್ಯೌಷಧ.
ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
ವಾಯು,ಮೂತ್ರಸಂಬಂಧದ ರೋಗಗಳಿಗೆ ಮುಖ್ಯೌಷಧ.

3- ಚಂದ್ರಘಂಟಾ ಯಾ ಚಂದ್ರಸೂರ: ಇದನ್ನು ಚಮಸೂರ ಎಂದೂ ಕರೆಯುತ್ತಾರೆ.ಇದು ಕೊತ್ತಂಬರಿಯ ರೀತಿಯಲ್ಲಿರುವ ಗಿಡ.ಇದರ ಎಲೆಗಳನ್ನು ಬಳಸಿ ಪಲ್ಯಗಳನ್ನು ಮಾಡುತ್ತಾರೆ.
ಸ್ಥೂಲಕಾಯವನ್ನು ಕರಗಿಸಲು ಸಹಕಾರಿ.ಇದರಿಂದ ಇದಕ್ಕೆ ಚರ್ಮಹಂತೀ ಎಂಬ ಹೆಸರೂ ಇದೆ.ಶಕ್ತಿವರ್ಧಕ,ಹೃದ್ರೋಗ ನಿವಾರಕವಾದ ಚಂದ್ರಿಕಾ ಉಪಯುಕ್ತ ಗಿಡ.

4-ಕೂಷ್ಮಾಂಡ: ಕುಂಬಳ.ಇದು ಪುಷ್ಟಿಕಾರಕ,ವೀರ್ಯವರ್ಧಕ,ರಕ್ತಸಂಬಂಧೀ ಸಮಸ್ಯೆಗಳ ಪರಿಹಾರಕ ಮತ್ತು ಉದರ ಶುದ್ಧಿಗೆ ಸಹಾಯಕ. ಮಾನಸಿಕವಾಗಿ ಅಬಲರಾದವರಿಗೆ ಇದು ದಿವ್ಯೌಷಧ.ಶರೀರದ ವೀಶೇಷವಾಗಿ ಹೃದಯ ಸಂಬಂಧೀ ಕಾಯಿಲೆಗಳಿಗೆ ರಾಮಬಾಣದಂತಿದೆ.

  ನವರಾತ್ರಿ 2ನೇ ದಿನ - ಬ್ರಹ್ಮಚಾರಿಣಿ ಪೂಜಾ ವಿಧಾನ

5-ಸ್ಕಂದಮಾತಾ ಯಾ ಅಲಸೀ: ಅಗಸೆ ಬೀಜ.
ವಾತ,ಪಿತ್ತ,ಕಫಗಳ ನಿಯಂತ್ರಣದಲ್ಲಿ ಸಹಾಯಕ. “ಅಲಸೀ ನೀಲಪುಷ್ಪೀ ಪಾವರ್ತತೀ ಸ್ಯಾದುಮಾ ಕ್ಷುಮಾ|

ಅಲಸೀ ಮಧುರಾ ತಿಕ್ತಾ ಸ್ತ್ರಿಗ್ಧಪಾಕೇ ಕದರ್ಗರುಃ||

ಉಷ್ಣಾ ದೃಷ ಶುಕವಾತಂಧೀ ಕಫ ಪಿತ್ತ ವಿನಾಶಿನೀ||

6- ಷಷ್ಠಮ ಕಾತ್ಯಾಯನೀ ಯಾ ಮೋಯಿಯಾ:ಅಂಬಾ,ಅಂಬಾಲಿಕಾ,ಅಂಬಿಕಾ,ಮಾಚಿಕಾ ಇತರ ಹೆಸರುಗಳು.ಇದು ಕಫ,ಪಿತ್ತ ಮತ್ತು ಕಂಠ ಸಂಬಂಧೀ ಕಾಯಿಲೆಗಳ ನಿವಾರಣೆಗೆ ಸಹಾಯಕ.

7- ಸಪ್ತಮ ಕಾಲರಾತ್ರೀ ಯಾ ನಾಗದೌನ್: ಸರ್ವರೋಗ ನಿವಾರಕ.ಮಸ್ತಿಷ್ಕದ ಎಲ್ಲಾ ವಿಕಾರಗಳನ್ನು ನಿವಾರಿಸಿ ವಿಜಯಶಾಲಿಗಳನ್ನಾಗಿಸುವುದು.ವಿಷ ನಿವಾರಕವೂ ಹೌದು.

  ಭೋಕ್ತಾ ಎಂದರೆ ಏನು? ಭಗವಂತ ಹೇಗೆ ಭೋಕ್ತ?

8-ತುಲಸೀ: ಏಳುವಿಧಗಳಿವೆ.ರಕ್ತಶುದ್ಧಿ,ಹೃದ್ರೋಗ ನಿವಾರಣೆಗೆ ಸಹಾಯಕ.
ತುಲಸೀ ಸುರಸಾ ಗ್ರಾಮ್ಯಾ ಸುಲಭಾ ಬಹುಮಂಜರೀ|
ಅಪೇತರಾಕ್ಷಸೀ ಮಹಾಗೌರೀ ಶೂಲಘ್ನೀ ದೇವದುಂದುಭಿಃ||
ತುಲಸೀ ಕಟುಕಾ ತಿಕ್ತಾಹುಧ ಉಷ್ಣಾಹಾಹಪಿಪಿತ್ತಕೃತ್|
ಮರುದನಿಪ್ರದೋ ಹಧ ತೀಕ್ಷ್ಣಾಷ್ಣಃ ಪಿತ್ತಲೋ ಲಘುಃ||

9- ನವಮ ಶತಾವರೀ: ನಾರಾಯಣೀ ಎಂದೂ ಕರೆಯುತ್ತಾರೆ.ಬುದ್ಧಿ-ವೀರ್ಯಬಲಗಳನ್ನು ಹೆಚ್ಚಿಸುವುದು.ಹೃದ್ಬಲ ವರ್ಧಕ.ರಕ್ತವಿಕಾರ ನಾಶಕ.ಸಿದ್ಧಿದಾತ್ರಿಯಾದ ಇದನ್ನು ನಿಯಮಾನುಸಾರ ಸೇವಿಸಿದರೆ ಸರ್ವಕಷ್ಟಗಳು ನಿವಾರಣೆಯಾಗುತ್ತವೆ.

▬▬▬ஜ۩۞۩ஜ▬▬▬▬▬▬ஜ۩۞۩ஜ▬▬

ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Leave a Reply

Your email address will not be published. Required fields are marked *

Translate »