ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

​ಗಣೇಶ ವಂದನಾ ಮಂತ್ರ ಸ್ತುತಿಯ ಪ್ರಯೋಜನಗಳು

‌ ‌ ‌ ‌ ‌
ಶ್ರೀ ಗಣೇಶ ವಂದನೆ ಯಾವುದು..! ಪಠಿಸಿದರೆ ಅದೃಷ್ಟದ ಬಾಗಿಲೇ ತೆರೆಯುವುದು..!

ಪ್ರತಿದಿನ, ಬುಧವಾರ ಅಥವಾ ವಿಶೇಷವಾಗಿ ಚತುರ್ಥಿಯ ದಿನ, ಗಣೇಶ ವಂದನೆ ಮಾಡುವುದರಿಂದ ಅಥವಾ ಓದುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು ಎನ್ನುವ ನಂಬಿಕೆಯಿದೆ. ಗಣಪತಿಯನ್ನು ಪೂಜಿಸುವಾಗ ದುರ್ವಾ, ಅಕ್ಷತೆ, ಪುಷ್ಪ, ಶ್ರೀಗಂಧ, ಧೂಪ, ದೀಪ, ನೈವೇದ್ಯ (ವಿಶೇಷವಾಗಿ ಲಡ್ಡು ಅಥವಾ ಮೋದಕ) ಇತ್ಯಾದಿಗಳನ್ನು ಶ್ರೀ ಗಣಪತಿಗೆ ಅರ್ಪಿಸಿ ಈ ಪ್ರಾರ್ಥನೆಯನ್ನು ಮಾಡಿದರೆ ಆತನ ವಿಶೇಷ ಕೃಪೆ ಲಭಿಸುತ್ತದೆ. ಶ್ರೀ ಗಣೇಶ ವಂದನೆ ಮತ್ತು ಅದರ ವಿಶೇಷ ಮಂಗಳಕರ ಫಲಿತಾಂಶಗಳೇನು ಎನ್ನುವುದನ್ನು ತಿಳಿದುಕೊಳ್ಳಿ..

​ಗಣೇಶ ವಂದನಾ ಮಂತ್ರ

”ಗಜಾನನಂ ಭೂತ ಗಣಾದಿ ಸೇವಿತಂ | ಕಪಿತ್ಥ ಜಂಬೂ ಫಲ ಚಾರೂ ಭಕ್ಷಣಂ |

ಉಮಾಸುತಂ ಶೋಕ ವಿನಾಶಕಾರಕ | ನಮಾಮಿ ವಿಘ್ನೇಶ್ವರ ಪಾದ ಪಂಕಜಂ||”

“ಗಣೇಶ ವಂದನಾ ಸ್ತುತಿಯ ಪ್ರಯೋಜನಗಳು…”

​ಜೀವನದ ಎಲ್ಲಾ ಅಡೆತಡೆಗಳು ದೂರಾಗುವುದು

ಪ್ರತಿನಿತ್ಯವಾಗಿರಬಹುದು ಅಥವಾ ಇನ್ಯಾವುದೇ ವಿಶೇಷ ದಿನಗಳಲ್ಲಾಗಿರಬಹುದು ಗಣೇಶ ವಂದನೆಯನ್ನು ಪಠಿಸುವುದರಿಂದ ಆ ವ್ಯಕ್ತಿಯ ಜೀವನದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.

  ಮಹಾ ವಿಷ್ಣು ಸ್ತೋತ್ರಂ - ಗರುಡಗಮನ ತವ

​ಇಷ್ಟಾರ್ಥಗಳು ಈಡೇರುವುದು

ಈ ಗಣೇಶ ವಂದನೆಯನ್ನು ಸರಳವಾಗಿ ಕೇಳುವ ಮೂಲಕ, ವಿಘ್ನನಾಶಕನಾದ ಗಣೇಶನು ನಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.

​ಬೇಡಿದ ವರವನ್ನು ನೀಡುವನು

ಗಣಪತಿಯು ಬುಧವಾರವನ್ನು ತುಂಬಾ ಇಷ್ಟಪಡುತ್ತಾನೆ, ಆದ್ದರಿಂದ ಈ ದಿನ, ವಿಶೇಷವಾಗಿ ಗಣೇಶ ವಂದನೆಯನ್ನು ಪಠಿಸುವ ಮೂಲಕ, ಗಣೇಶನು ಆ ಭಕ್ತನನ್ನು ಹೆಚ್ಚು ಇಷ್ಟಪಡುತ್ತಾನೆ ಮತ್ತು ಆತನು ಕೇಳಿದ ವರಗಳನ್ನು ನೀಡುತ್ತಾನೆ ಎನ್ನುವ ವಾಡಿಕೆ.

ಸುಖ ಸಂಪತ್ತು ದೊರೆಯುವುದು

ಧರ್ಮಗ್ರಂಥಗಳಲ್ಲಿ ಗಣೇಶನನ್ನು ಪ್ರಥಮ ಪೂಜಿತ (ಮೊದಲ ಆರಾಧಕ) ಎಂದು ಪರಿಗಣಿಸಲಾಗುತ್ತದೆ. ಮುಂಜಾನೆ ಆತನನ್ನು ಪೂಜಿಸುವುದರಿಂದ ಜೀವನದಲ್ಲಿ ಸುಖ ಸಂಪತ್ತು ಬರುತ್ತದೆ.

​ಅಪಾರ ಜ್ಞಾನ ಪ್ರಾಪ್ತಿ
ಶ್ರೀ ಗಣೇಶನನ್ನು ಬುದ್ಧಿವಂತಿಕೆ ಮತ್ತು ಚಾತುರ್ಯದ ದೇವರು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವರ ಆರಾಧನೆಯು ವ್ಯಕ್ತಿಯ ಬುದ್ಧಿಶಕ್ತಿಯನ್ನು ಬಹಳ ತೀಕ್ಷ್ಣಗೊಳಿಸುತ್ತದೆ. ಹೆಚ್ಚಾಗಿ ವಿದ್ಯಾರ್ಥಿಗಳು ಪ್ರತಿದಿನ ಈ ಸ್ತೋತ್ರವನ್ನು ಪಠಿಸಬೇಕು.

ಸಂವೃದ್ಧಿ
ನೀವು ಜೀವನದಲ್ಲಿ ಸಂವೃದ್ಧಿ ಸಂಪತ್ತನ್ನು ಬಯಸಿದರೆ, ನಿಮ್ಮ ಬುದ್ಧಿಶಕ್ತಿ ಮತ್ತು ವಿವೇಚನೆಯನ್ನು ಹೆಚ್ಚಿಸಲು, ಗಣೇಶ ವಂದನೆಯನ್ನು ಪಠಿಸುವುದರೊಂದಿಗೆ ಗಣಪತಿಯನ್ನು ಪೂಜಿಸುವುದರಿಂದ, ಸಂಪತ್ತಿನ ಹಾದಿಗಳು ಸುಲಭವಾಗಿ ತೆರೆದುಕೊಳ್ಳುತ್ತವೆ.

  ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನ - ಭಿಕ್ಷೆ ನೀಡಿರಿ

​ಅದೃಷ್ಟದ ಬಾಗಿಲು ತೆರೆದುಕೊಳ್ಳುವುದು
ಅದೃಷ್ಟವನ್ನು ಹೆಚ್ಚಿಸಲು ಪ್ರತಿದಿನ ಗಣೇಶನನ್ನು ಪೂಜಿಸಿ ಮತ್ತು ನಿಮ್ಮ ಜೀವನದಲ್ಲಿನ ಎಲ್ಲಾ ತೊಂದರೆಗಳ ಪರಿಹಾರಕ್ಕಾಗಿ ಸರಳವಾಗಿ ಪ್ರಾರ್ಥಿಸುವ ಮೂಲಕ, ಶ್ರೀ ಗಣೇಶನು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತಾನೆ ಮತ್ತು ಕುಟುಂಬದಲ್ಲಿ ಬರುವ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುವ ಮೂಲಕ ನಿಮಗೆ ಸಂಪತ್ತು, ಸಂತೋಷ, ಅದೃಷ್ಟವನ್ನು ನೀಡುತ್ತಾನೆ. ‌ ‌ ‌ ‌ ‌‌ ‌‌‌‌ ‌ ‌ ‌‌

ಗಣಪತಿ ವಂದನಾ ಸ್ತುತಿ ‌‌
‌‌ ‌ ವಂದೌ ಶ್ರೀ ಗಣಪತಿ ಪದ, ವಿಘ್ನವಿನಾಶನ ಹಾರ |

ಪವಿತ್ರತಾ ಕೀ ಶಕ್ತಿ ಜೋ, ಸಬ್ ಜಗ ಮೂಲಾಧಾರ || ೧ || ‌‌‌‌
ಹೇ ಪರಮ ಜ್ಞಾನ ದಾತಾ, ಸಕಲ ವಿಶ್ವ ಆಧಾರ |

ಕ್ಷಮಾ ಕರೇ ವರ ದೇ, ವಿಘ್ನೋ ಸೇ ಕರೇ ಉಬಾರ್ || ೨ || ‌ ‌‌ ‌ ಹೇ ಜಗ ವಂದನ, ಹೇ ಜಗನಾಯಕ |

ಹೇ ಗೌರೀನಂದನ, ಹೇ ವರದಾಯಕ‌ || ೩ || ‌ ‌ ‌ ‌‌

‌ ಹೇ ವಿಘ್ನವಿನಾಶನ, ಹೇ ಗಣನಾಯಕ |

ಹೇ ಭವಭಯ ಮೋಚನ, ಹೇ ಜನ ಸುಖದಾಯಕ || ೪ || ‌ ‌‌ ‌ ‌ ‌ ‌ ದಯಾ ಕರೋ ಹೇ ಪ್ರಭು, ದೇ ಸಬಕೋ ನಿರ್ಮಲ ಜ್ಞಾನ |

ಹೇ ಸಹಜ ಸಂತ, ದೇ ಹಮ್ ಕೋ ಯಹ್ ವರದಾನ || ೫ || ‌ ‌‌ ‌ ‌ ಮಂಗಲಮಯ ಹೋ ಗೀತ ಹಮಾರೇ ಕರೇ ಜನಮಲ್ಯಾಣ‌ |

ಮಾತೃಪ್ರೇಮ ಮೇ ನಿರತ ರಹೇ ಪಾವೇ ಪದ ನಿರ್ವಾಣ || ೬ ||


Leave a Reply

Your email address will not be published. Required fields are marked *

Translate »