ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನವರಾತ್ರಿ 2ನೇ ದಿನ – ಬ್ರಹ್ಮಚಾರಿಣಿ ಪೂಜಾ ವಿಧಾನ

ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಿದರೆ, ಎರಡನೇ ದಿನ ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ.

ಪಾರ್ವತಿಯೂ ಉಮಾ ಹೆಸರಿನಲ್ಲಿ ಹಿಮಾಲಯನ ಪುತ್ರಿಯಾಗಿ ಜನಿಸುತ್ತಾಳೆ. ನಾರದರ ಉಪದೇಶದಿಂದ ಉಮೆ ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸನ್ನು ಆಚರಿಸಿದ ಕಾರಣ ಇವಳಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು.

ಹಲವು ವರ್ಷ ಈಕೆ ಕೇವಲ ಫಲ ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳವರೆಗೆ ಕಠಿಣ ಉಪವಾಸವಿದ್ದು ತೆರೆದ ಆಕಾಶದ ಕೆಳಗೆ ಮಳೆ-ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು. ಈ ಕಠಿಣ ತಪಸ್ಸಿನ ಬಳಿಕ ಮೂರು ಸಾವಿರ ವರ್ಷಗಳವರೆಗೆ ಕೇವಲ ನೆಲದ ಮೇಲೆ ಉದುರಿಬಿದ್ದ ಬಿಲ್ವಪತ್ರಗಳನ್ನು ತಿಂದು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು. ಹೀಗಾಗಿ ಕೇವಲ ಎಲೆ(ಪರ್ಣ)ಗಳನ್ನು ತಿಂದು ಜೀವಿಸಿದ್ದರಿಂದ ಆಕೆಗೆ ಅಪರ್ಣ ಎನ್ನುವ ಹೆಸರು ಬಂತು.

ಕಠಿಣ ತಪಸ್ಸು ಮಾಡಿದರೂ ಶಿವನ ಅನುಗ್ರಹ ಸಿಗದ್ದಕ್ಕೆ ಅವಳು ಒಣಗಿದ ಬಿಲ್ವಪತ್ರಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಳು. ಅನೇಕ ಸಾವಿರ ವರ್ಷಗಳವರೆಗೆ ಅವಳು ಆಹಾರ-ನೀರೂ ಸೇವಿಸದೇ ಮತ್ತಷ್ಟು ಕಠಿಣ ತಪಸ್ಸು ಮುಂದುವರಿಸಿದ್ದಳು. ಅನೇಕ ಸಾವಿರ ವರ್ಷಗಳ ಈ ತಪಸ್ಸಿನಿಂದಾಗಿ ಉಮಾಳ ಶರೀರವು ತುಂಬಾ ಕ್ಷೀಣವಾಯಿತು. ಮಗಳ ದೇಹ ಕೃಶವಾಗುತ್ತಿರುವುದನ್ನು ಕಂಡು ತಾಯಿಯಾದ ಮೇನಾದೇವಿಯು ಅತಿ ದುಃಖಿತಳಾದಳು. ಇವಳ ಈ ತಪಸ್ಸಿನಿಂದ ಮೂರು ಲೋಕಗಳಲ್ಲಿ ಹಾಹಾಕಾರ ಎದ್ದಿತು.

  ನವರಾತ್ರಿ 6ನೇ ದಿನ ಕಾತ್ಯಾಯನಿ ದೇವಿ ಪೂಜೆ ವಿಧಾನ

ಕೊನೆಗೆ ಈಕೆಯ ಕಠಿಣ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ,”ಹೇ ದೇವಿ, ಇಂದಿನವರೆಗೆ ಯಾರೂ ಇಂತಹ ಕಠೋರ ತಪಸ್ಸು ಮಾಡಿರಲಿಲ್ಲ. ಇಂತಹ ತಪಸ್ಸು ನಿನ್ನಿಂದಲೇ ಸಂಭವಿಸಿದೆ. ನಿನ್ನ ತಪಸ್ಸಿನ ಬಗ್ಗೆ ಹೊಗಳಿಕೆ ಎಲ್ಲೆಡೆ ನಡೆಯುತ್ತಿದೆ. ನಿನ್ನ ಮನೋ ಕಾಮನೆಯು ಎಲ್ಲಾ ವಿಧದಿಂದ ಪೂರ್ಣವಾಗುತ್ತದೆ. ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು. ಈಗ ನೀನು ತಪಸ್ಸನ್ನು ಬಿಟ್ಟು ಮನೆಗೆ ಹಿಂತಿರುಗು” ಎಂದು ವರವನ್ನು ನೀಡುತ್ತಾನೆ. ನಂತರ ಶಿವನು ಬ್ರಹ್ಮಚಾರಿಣಿಯನ್ನು ಸತಿಯಾಗಿ ಸ್ವೀಕರಿಸುತ್ತಾನೆ.

ಬ್ರಹ್ಮಚಾರಿಣಿ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ, ಇವುಗಳ ವೃದ್ಧಿ ಆಗುತ್ತದೆ. ಬ್ರಹ್ಮಚಾರಿಣಿ ದೇವಿಯ ಕೃಪೆ ಇದ್ದರೆ ಆತನಿಗೆ ಎಲ್ಲೆಡೆ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆಯಿದೆ. ಈಕೆಯ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ. ಹೆಸರೇ ಸೂಚಿಸುವಂತೆ ತಾಯಿ ಬ್ರಹ್ಮಚಾರಿಣಿ ಎಂದರೆ ದೃಢತೆ ಮತ್ತು ನಡವಳಿಕೆಯ ದೇವತೆ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನೀವು ತಾಯಿಯ ಈ ರೂಪವನ್ನು ಪೂಜಿಸಬೇಕು. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಸಂಯಮ, ಪರಿತ್ಯಾಗ ಮತ್ತು ನಿರ್ಲಿಪ್ತತೆಯೊಂದಿಗೆ ವ್ಯಕ್ತಿಯಲ್ಲಿ ಸದ್ಗುಣದ ಭಾವನೆಗಳು ಸಹ ಬೆಳೆಯುತ್ತವೆ ಎನ್ನುವ ನಂಬಿಕೆಯಿದೆ.

  ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ ಎಂದರೇನು ? ಮತ್ತು ಅದರ ಮಹತ್ವ ಏನು ?

​ತಾಯಿ ಬ್ರಹ್ಮಚಾರಿಣಿ ಪೂಜೆ ವಿಧಾನ

– ಈ ದಿನ, ಭಕ್ತರು ಬೆಳಗಿನ ಪೂಜೆಯಲ್ಲಿ ಪಾಲ್ಗೊಳ್ಳಲು ಮುಂಜಾನೆ ಬೇಗ ಏಳಬೇಕು.

– ಪೂಜೆಗೆ ಪಾಲ್ಗೊಳ್ಳುವ ಮುನ್ನ ಶುದ್ಧವಾದ ಅಥವಾ ಸ್ವಚ್ಛವಾದ ಬಟ್ಟೆಯನ್ನು ಧರಿಸಿ, ಪೂಜೆಯಲ್ಲಿ ಭಾಗವಹಿಸಬೇಕು.

– ಬ್ರಹ್ಮಚಾರಿಣಿ ದೇವಿಯ ವಿಗ್ರಹವನ್ನು ಜೇನುತುಪ್ಪ ಮತ್ತು ಹಾಲಿನಿಂದ ಅಭಿಷೇಕ ಮಾಡಿ ಮತ್ತು ಅಂತಿಮವಾಗಿ ವಿಗ್ರಹದ ಹಣೆಗೆ ಸಿಂಧೂರವನ್ನು ಇಡಿ.

– ಪೂಜೆಯ ಸಮಯದಲ್ಲಿ ಭಕ್ತರು ಬ್ರಹ್ಮಚಾರಿಣಿ ದೇವಿಗೆ ಹೂವು, ಶ್ರೀಗಂಧ, ಹಾಲು, ಅನ್ನ, ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸುವುದು ಉತ್ತಮ.

– ಪೂಜೆಯ ಸಮಯದಲ್ಲಿ ಅವಳನ್ನು ದಾಸವಾಳ ಮತ್ತು ಬಿಳಿ ಕಮಲದ ಹೂವುಗಳಿಂದ ಪೂಜಿಸಲಾಗುತ್ತದೆ.

ತಾಯಿಗೆ ಪಿಸ್ತಾ ಸಿಹಿತಿಂಡಿಗಳು ತುಂಬಾ ಇಷ್ಟವೆಂದು ನಂಬಲಾಗಿದೆ. ಆದ್ದರಿಂದ, ಸಾಧ್ಯವಾದಷ್ಟು ಇವುಗಳನ್ನು ಪೂಜೆಯಲ್ಲಿ ಇಡಬೇಕು. ದಾಸವಾಳ ಮತ್ತು ಕಮಲದ ಹೂವು ತುಂಬಾ ಇಷ್ಟ. ಪೂಜೆಯ ಸಮಯದಲ್ಲಿ ತಾಯಿಗೆ ಈ ಹೂವುಗಳಿಂದ ಮಾಡಿದ ಮಾಲೆಯನ್ನು ಅರ್ಪಿಸಿ. ಏಕೆಂದರೆ ತಾಯಿಗೆ ಸಕ್ಕರೆ ಮತ್ತು ಸಕ್ಕರೆ ಮಿಠಾಯಿ ಕೂಡ ಇಷ್ಟ. ಹಾಗಾಗಿ ಇವುಗಳನ್ನು ಪೂಜೆಯಲ್ಲಿ ಅರ್ಪಿಸಬಹುದು. ಇದರಿಂದ ತಾಯಿಗೆ ತುಂಬಾ ಸಂತೋಷವಾಗುತ್ತದೆ.

  ದೇವರಿಗೆ ತೆಂಗಿನಕಾಯಿಯನ್ನು ಒಡೆಯುವುದರ ಉದ್ದೇಶವೇನು ?

​ಬ್ರಹ್ಮಚಾರಿಣಿ ಪೂಜೆ ಮಹತ್ವ

ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷವು ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಅವಳು ಅದೃಷ್ಟದ ನಿಯಂತ್ರಕ ಮಂಗಳ ದೇವನನ್ನು ನಿಯಂತ್ರಿಸುತ್ತಾಳೆ ಮತ್ತು ತನ್ನ ಅನುಯಾಯಿಗಳಿಗೆ ಬುದ್ಧಿವಂತಿಕೆ ಮತ್ತು ಸಂತೋಷವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.

​ಬ್ರಹ್ಮ ಚಾರಿಣಿ ಮಂತ್ರ

– ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ

– ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,

ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.

ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

Leave a Reply

Your email address will not be published. Required fields are marked *

Translate »