ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ವಾದಿರಾಜತೀರ್ಥ ವಿರಚಿತ ಶ್ರೀ ಲಕ್ಷ್ಮಿ ಶೋಭಾನ ಪದ

“ಲಕ್ಷ್ಮಿ ಶೋಭಾನ”
ಶ್ರೀ ವಾದಿರಾಜತೀರ್ಥ ವಿರಚಿತ ಶ್ರೀ ಲಕ್ಷ್ಮಿ ಶೋಭಾನ ಪದ


ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನಿ ಸುಗುಣನಿಗೆ |
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ |ಶೋಭಾನೇ | ಪ|

ಲಕ್ಷ್ಮಿ ನಾರಾಯಣರ ಚರಣಕ್ಕೆ ಶರಣೆಂಬೆ ಪಕ್ಷಿವಾಹನ್ನಗೆರಗುವೆ |
ಪಕ್ಷಿವಾಹನ್ನಗೆರಗುವೆ ಅನುದಿನ ರಕ್ಷಿಸಲಿ ನಮ್ಮ ವಧುವರರ | ೧ |

ಪಾಲಸಾಗರವನ್ನು ಲೀಲೆಯಲ್ಲಿ ಕಡೆಯಲು ಬಾಲೆ ಮಹಲಕ್ಷುಮಿ ಉದಿಸಿದಳು |
ಬಾಲ ಮಹಲಕ್ಷುಮಿ ಉದಿಸಿದಳಾ ದೇವೀ ಪಾಲಿಸಲಿ ನಮ್ಮ ವಧುವರರ | ೨ |

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ ಸುಮ್ಮನೆಯಾಗಿ ಮಲಗಿಪ್ಪ |
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಜನ್ಮವೆಂಬುದು ಅವತಾರ | ೩ |

ಕಂಬುಕOಠದ ಸುತ್ತ ಕಟ್ಟಿದ ಮಂಗಳಸೂತ್ರ ಅಂಬುಜವೆರಡು ಕರಯುಗದಿ |
ಅಂಬುಜವೆರಡು ಕರಯುಗದಿ ಧರಿಸಿ ಪೀತಾಂಬರವುಟ್ಟು ಮೆರೆದಳು | ೪ |

ಒಂದು ಕರದಿಂದ ಅಭಯವನೀವಳೆ ಮತ್ತೊಂದು ಕೈಯಿಂದ ವರಗಳ |
ಕುಂದಿಲ್ಲದಾನOದ ಸಂದೋಹ ಉಣಿಸುವ ಇಂದಿರೆ ನಮ್ಮ ಸಲಹಲಿ | ೫ |

ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು ನಲಿವ ಕಾಲಂದುಗೆ ಘಲುಕೆನಲು |
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮಿ ಸಲಹಲಿ ನಮ್ಮ ವಧುವರರ | ೬ |

ರನ್ನದ ಮೊಲೆಗಟ್ಟು ಚಿನ್ನದಾಭರಣಗಳ ಚೆನ್ನೆ ಮಹಲಕ್ಷುಮಿ ಧರಿಸಿದಳೆ |
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ ಮನೆಯ ವಧುವರರ ಸಲಹಲಿ | ೭ |

ಕುಂಭ ಕುಚದ ಮೇಲೆ ಇಂಬಿಟ್ಟ ಹಾರಗಳು ತುಂಬಿಗುರುಳ ಮುಖಕಮಲ |
ತುಂಬಿಗುರುಳ ಮುಖಕಮಲದ ಮಹಲಕ್ಷ್ಮಿ ಜಗದಂಬೆ ವಧುವರರ ಸಲಹಲಿ | ೮ |

ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷ್ಮಿ ಕಸ್ತೂರಿ ತಿಲಕ ಧರಿಸಿದಳೆ |
ಕಸ್ತೂರಿ ತಿಲಕ ಧರಿಸಿದಳಾ ದೇವಿ ಸರ್ವತ್ರ ವಧುವರರ ಸಲಹಲಿ | ೯ |

ಅಂಬುಜ ನಯನಗಳ ಬಿಂಬಾಧರದ ಶಶಿ ಬಿಂಬದೆOತೆಸೆವ ಮೂಗುತಿಮಣಿಯ |
ಬಿಂಬದೆOತೆಸೆವ ಮೂಗುತಿಮಣಿಯ ಮಹಲಕ್ಷ್ಮಿ ಉಂಬುದಕೀಯಲಿ ವಧುವರರ್ಗೆ|೧೦|

ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ ನೆತ್ತಿಯ ಮೇಲೆ ಧರಿಸಿದಳೆ |
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ ಭಕ್ತಿಯ ಜನರ ಸಲಹಲಿ | ೧೧ |

ಕುಂದಮOದಾರ ಜಾಜಿ ಕುಸುಮಗಳ ವೃಂದದ ಚೆಂದದ ತುರುಬಿಗೆ ತುರುಬಿದಳೆ |
ಕುಂದ ವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆಯಿಂದ ವಧುವರರ ಸಲಹಲಿ | ೧೨ |

ಎಂದೆOದು ಬಾಡದ ಅರವಿಂದದ ಮಾಲೆಯ ಇಂದಿರೆ ಪೊಳೆವ ಕೊರಳಲಿ |
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವಳಿಂದು ವಧುವರರ ಸಲಹಲಿ | ೧೩ |

ದೇವಾಂಗ ಪಟ್ಟೆಯ ಮೇಲು ಹೊದ್ದಿಕೆಯ ಭಾವೆ ಮಹಲಕ್ಷುಮಿ ಧರಿಸಿದಳೆ |
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ ಸೇವಕ ಜನರ ಸಲಹಲಿ | ೧೪ |

ಈ ಲಕ್ಷ್ಮಿದೇವಿಯ ಕಾಲುಂಗುರ ಘಲುಕೆನಲು ಲೋಲಾಕ್ಷಿ ಮೆಲ್ಲನೆ ನಡೆ ತಂದಳು |
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು ಆಲೋಚಿಸಿದಳು ಮನದಲ್ಲಿ | ೧೫ |

ತನ್ನ ಮಕ್ಕಳ ಕುಂದ ತಾನೇ ಪೇಳುವುದಕ್ಕೆ ಮನ್ನದಿ ನಾಚಿ ಮಹಲಕ್ಷ್ಮಿ |
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ ಉನ್ನಂತ ದೋಷಗಳನೆಣಿಸಿದಳು | ೧೬ |

ಕೆಲವರು ತಲೆಯೂರಿ ತಪಗೈದು ಪುಣ್ಯವ ಗಳಿಸಿದ್ದರೇನೂ ಫಲವಿಲ್ಲ |
ಜ್ವಲಿಸುವ ಕೋಪದಿ ಶಾಪವ ಕೊಡುವರು ಲಲನೆಯನಿವರು ಒಲಿಸುವರೆ | ೧೭ |

ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ ಕಲಿಸಿ ಕೊಡುವ ಗುರುಗಳು |
ಬಲ್ಲಿದ ಧನಕ್ಕೆ ಮರುಳಾಗಿ ಇಬ್ಬರು ಸಲ್ಲದ ಪುರೋಹಿತಕ್ಕೊಳಗಾದರು | ೧೮ |

ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ ಭಾಮಿನಿಯ ಹಿಂದೆ ಹಾರಿದವನೊಬ್ಬ|
ಕಾಮಾಂಧನಾಗಿ ಮುನಿಯ ಕಾಮಿನಿಗೈದವನೊಬ್ಬ ಕಾಮದಿ ಗುರುತಲ್ಪಗಾಮಿಯೊಬ್ಬ|೧೯|

ನಶ್ವರೈಶ್ವರ್ಯವ ಬಯಸುವನೊಬ್ಬ ಪರರಾಶ್ರಯಿಸಿ ಬಾಳುವ ಈಶ್ವರನೊಬ್ಬ |
ಹಾಸ್ಯವಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅದೃಶ್ಯಾಂಘ್ರಿಯೊಬ್ಬಒಕ್ಕಣ್ಣನೊಬ್ಬ|೨೦|

ಮಾವನ ಕೊಂದೊಬ್ಬ ಮರುಳಾಗಿಹನು ಗಡ ಹಾರ್ವನ ಕೊಂದೊಬ್ಬ ಬಳಲಿದ |
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ ಶಿವನಿಂದೊಬ್ಬ ಬಯಲಾದ | ೨೧ |

ಧರ್ಮ ಉಂಟೊಬ್ಬನಲಿ ಹೆಮ್ಮೆಯ ಹೆಸರಿಗೆ ಅಮ್ಮಮ್ಮ ತಕ್ಕ ಗುಣವಿಲ್ಲ |
ಕ್ಷಮೆಯ ಬಿಟ್ಟೊಬ್ಬ ನರಕದಲಿ ಜೀವರ ಮರ್ಮವ ಮೆಟ್ಟಿ ಕೊಲಿಸುವ | ೨೨ |

ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ ಬಲ್ಲಿದಗಂಜಿ ಬರಿಗೈದ |
ದುರ್ಲಭಮುಕ್ತಿಗೆ ದೂರವೆಂದೆನಿಸುವ ಪಾತಾಳ ತಳಕ್ಕೆ ಇಳಿದ ಗಾಡ | ೨೩ |

ಎಲ್ಲರಾಯುಷ್ಯವ ಶಿಂಶುಮಾರದೇವ ಸಲ್ಲೀಲೆಯಿಂದ ತೊಲಗಿಸುವ |
ಒಲ್ಲೆ ನಾನಿವರ ನಿತ್ಯಮುತ್ತೈದೆಯಂದು ಬಲ್ಲವರೆನ್ನ ಭಜಿಸುವರು | ೨೪ |

ಪ್ರಕೃತಿಯ ಗುಣದಿಂದ ಕಟ್ಟು ಒಡೆದು ನಾನಾ ವಿಕೃತಿಗೊಳಗಾಗಿ ಭವದಲ್ಲಿ |
ಸುಖದು:ಖವುಂಬ ಬೊಮ್ಮಾದಿ ಜೀವರು ದು:ಖಕ್ಕೆ ದೂರಳೆನಿಪ ಎನಗೆಣೆಯೆ|೨೫ |

ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ ಒಬ್ಬನಾವನಿಗೆ ಶಯನಾಹ |
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ ಅಬ್ಬರದಲಾವಾಗ ಸುಳಿವರು | ೨೬ |

ಒಬ್ಬನಾವನ ನಾಮಕಂಜಿ ಬೆಚ್ಚುವ ಗಡ ಸರ್ವರಿಗಾವ ಅಮೃತವ |
ಸರ್ವರಿಗಾವ ಅಮೃತವನುಣಿಸುವ ಅವನೊಬ್ಬನೆ ನಿರನಿಷ್ಟ ನಿರವದ್ಯ | ೨೭ |

ನಿರನಿಷ್ಟ ನಿರವದ್ಯ ಎಂಬ ಸೃತ್ಯರ್ಥವ ಒರೆದು ನೋಡಲು ನರಹರಿಗೆ |
ನರಕಯಾತನೆ ಸಲ್ಲ ದುರಿತಾತಿದೂರನಿಗೆ ಮರುಳಮನಬಂದOತೆ ನುಡಿಯದಿರು|೨೮|

ಒಂದೊOದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸಿವೆ ಬಹು ದೋಷ |
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು | ೨೯ |

  ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ ಎಂದರೇನು ? ಮತ್ತು ಅದರ ಮಹತ್ವ ಏನು ?

ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು ತೀವಿರ್ದ ಹರಿಗೆ ದುರಿತವ |
ಭಾವಜ್ಞರೆಂಬರೆ ಅಗಾಲದೆಲೆ ಮೇಲೆ ಶಿವನ ಲಿಂಗವ ನಿಲಿಸುವರೆ | ೩೦ |

ಹಸಿ ತೃಷೆ ಜರೆ ಮರಣ ರೋಗ ರುಜಿನಗಳೆಂಬ ಅಸುರ ಪಿಶಾಚಿಗಳ ಭಯವೆಂಬ |
ವ್ಯಸನ ಬರಬಾರದು ಎಂಬ ನಾರಾಯಣಗೆ ಪಸು ಮೊದಲಾದ ನೆನೆಯದು | ೩೧ |

ತಾ ದು:ಖಿಯಾದರೆ ಸುರರಾರ್ತಿಯ ಕಳೆದು ಮೋದವೀವುದಕೆ ಧರೆಗಾಗಿ |
ಮಾಧವ ಬಾಹನೆ ಕೆಸರೊಳು ಮುಳಿಗಿದವ ಪರರ ಬಾಧಿಪ ಕೆಸರ ಬಿಡಿಸುವನೆ|೩೨|

ಬೊಮ್ಮನಾಲಯದಲ್ಲಿ ಇದ್ದವಗೆ ಲಯ ಉಂಟೆ ಜನ್ಮ ಲಯವಿಲ್ಲದವನಿಗೆ |
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ ಅಮ್ಮ ಇವಗೆ ಹಸಿ ತೃಷೆಯುಂಟೆ|೩೩ |

ಆಗ ಭಕ್ಷ್ಯ ಭೋಜ್ಯವಿತ್ತು ಪೂಜಿಸುವ ಯೋಗಿಗಳುಂಟೆ ಧನಧಾನ್ಯ |
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ ಮತ್ತಾಗಲೆಲ್ಲಿಹುದು ವಿಚಾರಿಸಿರೋ|೩೪|

ರೋಗವನೀವ ವಾತಪಿತ್ತಶ್ಲೇಷ್ಮ ಆಗ ಕೊಡುವುದೇ ರಮೆಯೊಡನೆ |
ಭೋಗಿಸುವವಗೆ ದುರಿತವ ನೆನೆವರೆ ಈ ಗುಣನಿಧಿಗೆ ಎಣೆಯುಂಟೆ | ೩೫ |

ರಮ್ಮೆ ದೇವಿಯರನಪ್ಪಿಕೊಂಡಿಪುö್ಪದು ರಮ್ಮೆಯರಸಗೆ ರತಿ ಕಾಣಿರೊ |
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ ಕುಮ್ಮಾರರು ಯಾಕೆ ಜನಿಸರು|೩೬|

ಏಕತ್ರ ನಿರ್ಣೀತ ಶಾಸ್ತಾçರ್ಥ ಪರತ್ರಾಪಿ ಬೇಕೆಂಬ ನ್ಯಾಯವ ತಿಳಿದುಕೋ |
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿಲುಕ್ಕನೆಂಬೋದು ಸಲಹಲಿಕೆ | ೩೭ |

ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ ಸಲ್ಲದು ರೋಗ ರುಜಿನವು |
ಬಲ್ಲ ವೈದ್ಯರ ಕೇಳಿ ಅಜೀರ್ತಿ ಮೂಲವಲ್ಲದಿಲ್ಲ ಸಮಸ್ತ ರುಜಿನವು | ೩೮ |

ಇಂಥ ಮೂರುತಿಯ ಒಳಕೊಂಬ ನರಕ ಬಹು ಭ್ರಾಂತನೇನೆಲ್ಲಿOದ ತೋರುವೆಲೊ|
ಸಂತೆಯ ಮರುಳ ಹೋಗೆಲೋ ನಿನ್ನ ಮಾತ ಸಂತರು ಕೇಳಿ ಸೊಗಸರು | ೩೯ |

ಶ್ರೀ ನಾರಾಯಣರ ಜನನಿ ಜನಕರ ನಾನೆಂಬ ವಾದಿ ನುಡಿಯೆಲೋ |
ಜಾಣರದರಿಂದರಿಯ ಮೂಲರೂಪವ ತೋರಿ ಶ್ರೀ ನಾರಸಿಂಹನ ಅವತಾರ | ೪೦ |

ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ ಎಂಬ ಶ್ರೀಹರಿಯ ಪಿತನಾರು|
ಎಂಬ ಶ್ರೀಹರಿಯ ಪಿತನಾರು ಅದರಿಂದ ಸ್ವಯುಂಭುಗಳೆಲ್ಲ ಅವತಾರ | ೪೧ |

ದೇವಕಿಯ ಗರ್ಭದಲಿ ದೇವನವತರಿಸಿದ ಭಾವವನು ಬಲ್ಲ ವಿವೇಕಿಗಳು |
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ ಆವ ಪರಿಯಲಿ ನುಡಿವೆಯೋ | ೪೨ |

ಆಕಳಿಸುವಾಗ ಯಶೋದಾದೇವಿಗೆ ದೇವ ತನ್ನೊಳಗೆ ಹುದುಗಿದ್ದ |
ಭುವನವೆಲ್ಲವ ತೋರಿದ್ದುದಿಲ್ಲವೆ ಆ ವಿಷ್ಣು ಗರ್ಭದೊಳಡಗುವನೆ | ೪೩ |

ಆನೆಯ ಮಾನದಲಿ ಆದಗಿಸಿದವರುಂಟೆ ಅನೇಕ ಕೋಟಿ ಅಜಾಂಡವ |
ಅಣುರೋಮ ಕೋಪದಲಿ ಆಳ್ದ ಶ್ರೀಹರಿಯ ಜನನಿ ಜಠರವು ಒಳಕೊಂಬುದೆ|೪೪ |

ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ ಮದನನಿವನ ಕುಮಾರನು |
ಕದನದಿ ಕಣೆಗಳ ಇವನೆದೆಗೆಸೆವನೆ ಸುದತೇರಿಗಿವನಿಂತು ಸಿಲುಕುವನೆ | ೪೫ |

ಅದರಿಂದ ಕೃಷ್ಣಗೆ ಪರನಾರಿ ಸಂಗವ ಕೋವಿದರಾದ ಬುಧರು ನುಡಿವರೆ |
ಸದರವೆ ಈ ಮಾತು ಸರ್ವ ವೇದಂಗಳು ಮುದದಿಂದ ತಾವು ಸ್ತುತಿಸುವವು| ೪೬ |

ಎಂದ ಭಾಗವತದ ಚೆಂದದ ಮಾತನು ಮಂದ ಮಾನವ ಮನಸಿಗೆ |
ತಂದು ಕೊಜಗಕೆ ಕೈವಲ್ಯವೀವ ಮುಕುಂದಗೆ ಕುಂದು ಕೊರತೆ ಸಲ್ಲದು | ೪೭ |

ಹತ್ತು ವರುಷದ ಕೆಳಗೆ ಮಕ್ಕಳಾಟಿಕೆಯಲ್ಲಿ ಚಿತ್ತಸ್ತ್ರೀಯರಿಗೆ ಎರಗುವುದೆ |
ಅರ್ತಿಯಿಂದರ್ಚಿಸಿದ ಗೋಕುಲದ ಕನ್ನೆಯರ ಸತ್ಯಸಂಕಲ್ಪ ಬೆರೆತಿದ್ದ | ೪೮ |

ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ ಹತ್ತು ಹತ್ತೆನಿಪ ಕ್ರಮದಿಂದ |
ಪುತ್ರರನು ವೀರ್ಯದಲಿ ಸೃಷ್ಟಿಸಿದವರುಂಟೆ ಅರ್ತಿಯ ಸೃಷ್ಟಿ ಹರಿಗಿದು | ೪೯ |

ರೋಮ ರೋಮ ಕೂಪ ಕೋಟಿ ವೃಕಂಗಳ ನಿರ್ಮಿಸಿ ಗೋಪಾಲರ ತೆರಳಿಸಿದ |
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ ಮಹಿಮೆ ಬಲ್ಲವರಿಗೆ ಸಲಹಲಿಕೆ | ೫೦ |

ಮಣ್ಣನೇಕೆ ಮೆದ್ದೆ ಎಂಬ ಯಶೋದೆಗೆ ಸಣ್ಣ ಬಾಯೊಳಗೆ ಜಗಂಗಳ |
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ ಘನ್ನತೆ ಬಲ್ಲವರಿಗೆ ಸಲಹಲಿಕೆ | ೫೧ |

ನಾರದ ಸನಕಾದಿ ಮೊದಲಾದ ಯೋಗಿಗಳು ನಾರಿಯರಿಗೆ ಮರುಳಾದರೆ |
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ ಆರಾಧಿಸುತ್ತ ಭಜಿಸುವರೆ | ೫೨ |

ಅಂಬುಜ ಸಂಭವ ತ್ರಿಯಂಬಕ ಮೊದಲಾದ ನಂಬಿದವರಿಗೆ ವರವಿತ್ತ |
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ ಇಂಬಿದ್ದರಿವನ ಭಜಿಸುವರೆ | ೫೩ |

ಅವನುಂಗುಷ್ಟವ ತೊಳೆದ ಗಂಗಾದೇವಿ ಪಾವನಳೆನಿಸಿ ಮೆರೆಯಳೆ |
ಜೀವನ ಸೇರುವ ಪಾಪವ ಕಳೆವಳು ಈ ವಾಸುದೇವಗೆ ಎಣೆಯುಂಟೆ | ೫೪ |

ಕಿಲ್ಬಿಷವಿದ್ದರೆ ಅಗ್ರಪೂಜೆಯನು ಸರ್ಬರಾಯರ ಸಭೆಯೊಳು |
ಉಬ್ಬಿದ ಮನದಿಂದ ಧರ್ಮಜ ಮಾಡುವನೆ ಕೊಬ್ಬದಿರೆಲೊ ಪರವಾದಿ | ೫೫ |

ಸಾವಿಲ್ಲದ ಹರಿಗೆ ನರಕ ಯಾತನೆ ಸಲ್ಲ ಜೀವಂತರಿಗೆ ನರಕದಲಿ |
ನೋವನೀವನು ನಿಮ್ಮ ಯಮದೇವನು ನೋವ ನೀ ಹರಿಯ ಗುಣವರಿಯೆ | ೫೬ |

ನರಕವಾಳುವ ಯಮಧರ್ಮರಾಜ ತನ್ನ ನರಜನ್ಮದೊಳಗೆ ಪೊರಳಿಸಿ |
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು ಕುರು ನಿನ್ನ ಕುಹಕ ಕೊಳದಲ್ಲಿ | ೫೭ |

ಬೊಮ್ಮನ ನೂರು ವರುಷ ಪರಿಯಂತ ಪ್ರಳಯದಲಿ ಸುಮ್ಮನೆಯಾಗಿ ಮಲಗಿರ್ದ |
ನಮ್ಮ ನಾರಾಯಣಗೆ ಹಸಿ ತೃಷೆ ಜರೆಮರಣ ದುಷ್ಕರ್ಮದು:ಖಗಳ ತೊಡಗಿಸುವರೆ|೫೮|

  ಪ್ರಜಾಕೀಯ - ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ

ರಕ್ಕಸರಸ್ತçಗಳಿಂದ ಗಾಯವಡೆಯದ ಅಕ್ಷಯಕಾಯದ ಸಿರಿಕೃಷ್ಣ |
ತುಚ್ಚ ಯಮಭಟರ ಶಸ್ತ್ರ ಕಳಕುವನಲ್ಲ ಹುಚ್ಚ ನೀ ಹರಿಯ ಗುಣವರಿಯ | ೫೯ |

ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು ತುಚ್ಚ ನರಕದೊಳು ಅನಲನಿಗೆ |
ಬೆಚ್ಚುವನಲ್ಲ ಅದರಿಂದಿವಗೆ ನರಕ ಮೆಚ್ಚುವರಲ್ಲ ಬುಧರೆಲ್ಲ | ೬೦ |

ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ ರಣರಂಗದಿ ಕ್ಷಮಿಸುವನೆ |
ಅಣುವಾಗಿ ನಮ್ಮ ಹಿತಕ್ಕೆ ಮನದೊಳಗಿನ ಕೃಷ್ಣ ಮುನಿವಕಾಲಕ್ಕೆ ಮಹತ್ತಾಪ|೬೧ |

ತಾಯ ಪೊಟ್ಟೆಯಿಂದ ಮೂಲರೂಪವ ತೋರಿ ಆಯುಧ ಸಹಿತ ಪೊರವಂಟ |
ನ್ಯಾಯ ಕೋವಿದರು ಪುಟ್ಟಿದನೆಂಬರೆ ಬಾಯಿಗೆ ಬಂದOತೆ ಬೊಗಳದಿರು | ೬೨ |

ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು ಇಟ್ಟ ನವರತ್ನದ ಮುಕುಟವು |
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ ವಿಠಲ ಪುಟ್ಟಿದನೆನಬಹುದೆ | ೬೩ |

ಋಷಭಹಂಸ ಮೇಷ ಮಹಿಷ ಮೂಷಕವಾಹನವೇರಿ ಮಾನಿಸರಂತೆ ಸುಳಿವ ಸುರರೆಲ್ಲ|
ಎಸೆವ ದೇವೇಶಾನರ ಸಾಹಸಕ್ಕೆ ಮಣಿದರು ಕುಸುಮನಾಭನಿಗೆ ಸರಿಯುಂಟೆ |೬೪ |

ಒಂದೊOದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸೆವೆ ಬಹು ದೋಷ |
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು | ೬೫ |

ಇಂತು ಚಿಂತಿಸಿ ರಮೆ ಸಂತ ರಾಮನ ಪದವ ಸಂತೋಷ ಮನದಿ ನೆನೆವುತ್ತ |
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀಕಾಂತನಿದ್ದೆಡೆಗೆ ನಡೆದಳು | ೬೬ |

ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ ಚೆಂದವಾಗಿದ್ದ ಚೆಲುವನ |
ಇಂದಿರೆ ಕಂಡು ಇವನೆ ತನಗೆ ಪತಿ ಎಂದವನ ಬಳಿಗೆ ನಡೆದಳು | ೬೭ |

ಈ ತೆರದಿ ಸುರರ ಸುತ್ತ ನೋಡುತ್ತ ಚಿತ್ತವ ಕೊಡದೆ ನಸುನಗುತ |
ಚಿತ್ತವ ಕೊಡದೆ ನಸುನಗುತ ಬಂದು ಪುರುಷೋತ್ತಮನ ಕಂಡು ನಮಿಸಿದಳು|೬೮ |

ನಾನಾ ಕುಸುಮಗಳಿಂದ ಮಾಡಿದ ಮಾಲೆಯ ಶ್ರೀನಾರಿ ತನ್ನ ಕರದಲ್ಲಿ |
ಪೀನ ಕಂಧರನ ತ್ರಿವಿಕ್ರಮರಾಯನ ಕೊರಳಿನ ಮೇಲಿಟ್ಟು ನಮಿಸಿದಳು | ೬೯ |

ಉಟ್ಟ ಪೊಂಬಟ್ಟೆಯು ತೊಟ್ಟಾಭರಣಗಳು ಇಟ್ಟ ನವರತ್ನದ ಮುಕುಟವು |
ದುಷ್ಟ ಮರ್ದನನೆಂಬ ಕಡೆಯ ಪೆಂಡೆಗಳ ವಟ್ಟಿದ್ದ ಹರಿಗೆ ವಧುವಾದಳು |೭೦ |

ಕೊಂಬು ಚೆಂಬಕ ಕಹಳೆ ತಾಳ ಮದ್ದಳೆಗಳು ತಂಬಟೆ ಭೇರಿ ಪಟಹಗಳು |
ಭೋಂಭೋO ಎಂಬ ಶಂಖ ಡೊಳ್ಳುಮೌರಿಗಳು ಅಂಬುಧಿಯ ಮನೆಯಲ್ಲೆಸೆದವು|೭೧|

ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶನರ್ಘ್ಯ ಪೂಜೆಯನ್ನಿತ್ತನಳಿಯಗೆ |
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು ಸದ್ಗತಿಯಿತ್ತು ಸಲಹೆಂದ | ೭೨ |

ವೇದೋಕ್ತ ಮಂತ್ರ ಪೇಳಿ ವಸಿಷ್ಠನಾರದ ಮೊದಲಾದ ಮುನೀಂದ್ರರು ಮುದದಿಂದ|
ವಧುವರರ ಮೇಲೆ ಶೋಭನದಕ್ಷತೆಯನು ಮೋದವೀಯುತ್ತ ತಳಿದರು | ೭೩ |

ಸಂಭ್ರಮದಿOದOಬರದಿ ದುಂಧುಭಿ ಮೊಳಗಲು ತುಂಬುರು ನಾರದರು ತುತಿಸುತ್ತ |
ತುಂಬುರು ನಾರದರು ತುತಿಸುತ್ತ ಪಾಡಿದರು ಪೀತಾಂಬರಧರನ ಮಹಿಮೆಯ |೭೪|

ದೇವ ನಾರಿಯರೆಲ್ಲ ಬಂದೊದಗಿ ಪಾಠಕರು ಓವಿ ಪಾಡುತ್ತ ಕುಣಿದರು |
ದೇವ ತರುವಿನ ಹೂವಿನ ಮಳೆಗಳ ಶ್ರೀವರನ ಮೇಲೆ ಕರೆದರು | ೭೫ |

ಮುತ್ತು ರತ್ನಗಳಿಂದ ಕೆತ್ತಿಸಿದ ಹಸೆಯ ನವರತ್ನ ಮಂಟಪದಿ ಪಸರಿಸಿ |
ನವರತ್ನ ಮಂಟಪದಿ ಪಸರಿಸಿ ಕೃಷ್ಣನ ಮುತ್ತೈದೆಯರೆಲ್ಲ ಕರೆದರು | ೭೬ |

ಶೇಷಶಯನನೆ ಬಾ ದೋಷ ದೂರನೆ ಬಾ ಭಾಸುರಕಾಯ ಹರಿಯೆ ಬಾ |
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿಲಾಸಂದಿದೆಮ್ಮ ಹಸೆಗೆ ಬಾ | ೭೭ |

ಕಂಜಲೋಚನನೆ ಬಾ ಮಂಜುಳ ಮೂರ್ತಿ ಬಾ ಕುಂಜರವರದಾಯಕನೆ ಬಾ |
ಕುಂಜರವರದಾಯಕನೆ ಬಾ ಶ್ರೀ ಕೃಷ್ಣ ನಿರಂಜನ ನಮ್ಮ ಹಸೆಗೆ ಬಾ | ೭೮ |

ಆದಿ ಕಾಲದಲ್ಲಿ ಆಲದೆಲೆಯ ಮೇಲೆ ಶ್ರೀದೇವಿಯರೊಡನೆ ಪವಡಿಸಿದ |
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ ಮೋದದಿಂದೆಮ್ಮ ಹಸೆಗೆ ಬಾ | ೭೯ |

ಅದಿಕಾರಣನಾಗಿ ಆಗ ಮಲಗಿದ್ದು ಮೋದ ಜೀವರ ತನ್ನುದರದಲಿ |
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅನಾದಿ ಮೂರುತಿಯೆ ಹಸೆಗೆ ಬಾ |೮೦ |

ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋತಿರ್ಮಯವಾದ ಪದ್ಮದಲಿ |
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ ನಮ್ಮ ಮನೆಯ ಹಸೆಗೆ ಬಾ | ೮೧ |

ನಾನಾವತಾರದಲಿ ನಂಬಿದ ಸುರರಿಗೆ ಆನಂದವೀವ ಕರುಣಿ ಬಾ |
ಆನಂದವೀವ ಕರುಣಿ ಬಾ ಶ್ರೀಕೃಷ್ಣ ಶ್ರೀನಾರಿಯರೊಡನೆ ಹಸೆಗೆ ಬಾ | ೮೨ |

ಬೊಮ್ಮನ ಮನೆಯಲ್ಲಿ ರನ್ನದ ಪೀಠದಿ ಕುಳಿದು ಒಮ್ಮನದಿ ನೇಹವ ಮಾಡುವ |
ನಿರ್ಮಲಪೂಜೆಯ ಕೈಗೊಂಬ ಶ್ರೀಕೃಷ್ಣಪರಬೊಮ್ಮಮೂರುತಿಯೆ ಹಸೆಗೆ ಬಾ|೮೩|

ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿಕ್ಕೆ ಬಡಿಸಿದ ರಸಾಯನವ |
ಸಕ್ಕರೆಗೂಡಿದ ಪಾಯಸ ಸವಿಯುವ ರಕ್ಕಸವೈರಿಯ ಹಸೆಗೆ ಬಾ | ೮೪ |

ರುದ್ರನ ಮನೆಯಲ್ಲಿ ರುದ್ರಾಣಿ ದೇವಿಯರು ಭದ್ರಮಂಟಪದಿ ಕುಳ್ಳಿರಿಸಿ |
ಸ್ವಾದ್ವನ್ನಗಳನು ಬಡಿಸಲು ಕೈಗೊಂಬ ಮುದ್ದು ನರಸಿಂಹ ಹಸೆಗೆ ಬಾ | ೮೫ |

ಗರುಡನ ಮೇಲೇರಿ ಗಗನ ಮಾರ್ಗದಲ್ಲಿ ತರತರದಿ ಸ್ತುತಿಪ ಸುರಸ್ತ್ರೀಯರ |
ಮೆರೆವ ಗಂಧರ್ವರ ಗಾನವ ಸವಿಯುವ ನರಹರಿ ನಮ್ಮ ಹಸೆಗೆ ಬಾ | ೮೬ |

  ಹುಡುಗ ಮತ್ತು ಹುಡುಗಿಯರಲ್ಲಿ ಬೇಧ ಭಾವ ಏಕೆ ? - ಒಂದು ಅದ್ಭುತ ಕಥೆ !

ನಿಮ್ಮಣ್ಣನ ಮನೆಯಲ್ಲಿ ಸುಧರ್ಮ ಸಭೆಯಲ್ಲಿ ಉಮ್ಮೆಯರಸ ನಮಿಸಿದ |
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪರಮ್ಮ ಮೂರುತಿಯೆ ಹಸೆಗೆ ಬಾ | ೮೭ |

ಇಂದ್ರನ ಮನೆಗೆ ಹೋಗಿ ಅದಿತಿಗೆ ಕುಂಡಲವಿತ್ತು ಅಂದದ ಪೂಜೆಯ ಕೈಗೊಂಡು |
ಅಂದದ ಪೂಜೆಯ ಕೈಗೊಂಡು ಸುರತರುವ ಇಂದಿರೆಗಿತ್ತ ಹರಿಯೆ ಬಾ | ೮೮ |

ನಿಮ್ಮ ನೆನೆವ ಮುನಿ ಹೃದಯದಲಿ ನೆಲೆಸಿದ ಧರ್ಮ ರಕ್ಷಕನೆನಿಸುವ |
ಸಮ್ಮತವಾಗಿದ್ದ ಪೂಜೆಯ ಕೈಗೊಂಬ ನಿಸ್ಸೀಮ ಮಹಿಮ ಹಸೆಗೆ ಬಾ | ೮೯ |

ಮುತ್ತಿನ ಸತ್ತಿಗೆ ನವರತ್ನದ ಚಾಮರ ಸುತ್ತ ನಲಿವ ಸುರಸ್ತ್ರೀಯರ |
ನೃತ್ಯವ ನೋಡುತ್ತ ಚಿತ್ರವಾದ್ಯಂಗಳ ಸಂಪತ್ತಿನ ಹರಿಯೆ ಹಸೆಗೆ ಬಾ | ೯೦ |

ಎನಲು ನಗುತ ಬಂದು ಹಸೆಯ ಮೇಲೆ ವನಿತೆ ಲಕ್ಷ್ಮಿಯೊಡಗೂಡಿ |
ಅನಂತವೈಭವದಿ ಕುಳಿತ ಕೃಷ್ಣನ ನಾಲ್ಕು ದಿನದುತ್ಸವ ನಡೆಸಿದರು | ೯೧ |

ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾರತಿ ಮೊದಲಾದ ಸುರಸ್ತ್ರೀಯರು |
ಮುತ್ತಿನಕ್ಷತೆಯನು ಶೋಭನವೆನುತ ತಮ್ಮರ್ತಿಯಳಿಯಗೆ ತಳಿದರು | ೯೨ |

ರತ್ನದಾರತಿಗೆ ಸುತ್ತಮುತ್ತನೆ ತುಂಬಿ ಮುತ್ತೈದೆಯರೆಲ್ಲ ಧವಳದ |
ಮುತ್ತೈದೆರೆಲ್ಲ ಧವಳದ ಪದವ ಪಾಡುತ್ತಲೆತ್ತಿದರು ಸಿರಿವರಗೆ | ೯೩ |

ಬೊಮ್ಮ ತನ್ನರಸಿ ಕೂಡೆ ಬಂದೆರಗಿದ ಉಮ್ಮೆಯರಸ ನಮಿಸಿದ |
ಅಮ್ಮರರೆಲ್ಲರು ಬಗೆ ಬಗೆ ಉಡುಗೊರೆಗಳ ರಮ್ಮೆಯರಸಗೆ ಸಲಿಸಿದರು | ೯೪ |

ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ ಮುಕ್ತ ಸುರರು ಮುದದಿಂದ |
ಮುತ್ತಿನ ಕಂಠೀಸರ ಮುಖ್ಯಪ್ರಾಣನಿತ್ತ ಮಸ್ತಕ ಮಣಿಯ ಶಿವನಿತ್ತ | ೯೫ |

ತನ್ನರಸಿ ಕೂಡೆ ಸವಿನುಡಿ ನುಡಿವಾಗ ವದನದಲ್ಲಿದ್ದಗ್ನಿ ಕೆಡದಂತೆ |
ವಹ್ನಿ ಪ್ರತಿಷ್ಟೆಯ ಮಾಡಿ ಅವನೊಳಗಿದ್ದ ತನ್ನಾಹುತಿಯಿತ್ತ ಸುರರಿಗೆ | ೯೬ |

ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ ಉಬ್ಬಿದ ಹರುಷದಲಿ ಉಣಿಸಲು |
ಉಬ್ಬಿದ ಹರುಷದಲಿ ಉಣಿಸಬೇಕೆಂದು ಸಿಂಧು ಸರ್ಬರ್ಗೆದೆಯ ಮಾಡಿಸಿದ | ೯೭ |

ಮಾವನ ಮನೆಯಲ್ಲಿ ದೇವರಿಗೌತಣವ ದಾನವರು ಕೆಡಿಸದೆ ಬಿಡರೆಂದು |
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ ದೇವ ಸ್ತ್ರೀವೇಷವ ಧರಿಸಿದ | ೯೮ |

ತನ್ನ ಸೌಂದರ್ಯದಿOದನ್ನOತ ಮಡಿಯಾದ ಲಾವಣ್ಯದಿ ಮೆರೆವ ನಿಜ ಪತಿಯ |
ಹೆಣ್ಣುರೂಪವ ಕಂಡು ಕನ್ನೆ ಮಹಲಕ್ಷ್ಮಿ ಇವಗನ್ಯರೇಕೆಂದು ಬೆರಗಾದಳು | ೯೯ |

ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ ಭಾವುಕರೆಲ್ಲ ಮರುಳಾಗೆ |
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ ಸೇವಕ ಸುರರಿಗುಣಿಸಿದ |೧೦೦ |

ನಾಗನ ಮೇಲೆ ತಾ ಮಲಗಿದ್ದಾಗ ಆಗಲೆ ಜಗವ ಜತನದಿ |
ಆಗಲೆ ಜಗವ ಜತನದಿ ಧರಿಸೆಂದು ನಾಗಬಲಿಯ ನಡೆಸಿದರು | ೧೦೧ |

ಕ್ಷುಧೆಯ ಕಳೆವ ನವರತ್ನದ ಮಾಲೆಯ ಮುದದಿಂದ ವಾರಿಧಿ ವಿಧಿಗಿತ್ತ |
ಚದುರ ಹಾರವ ವಾಯುದೇವರಿಗಿತ್ತ ವಿಧುವಿನ ಕಲೆಯ ಶಿವಗಿತ್ತ | ೧೦೨ |

ಶಕ್ರ ಮೊದಲಾದ ದಿಕ್ಪಾಲಕರಿಗೆ ಸೊಕ್ಕಿದ ಚೌದಂತ ಗಜಂಗಳ |
ಉಕ್ಕಿದ ಮನದಿಂದ ಕೊಟ್ಟ ವರುಣ ಮದುಮಕ್ಕಳಾಯುಷ್ಯವ ಬೆಳೆಸೆಂದ | ೧೦೩ |

ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ ಚಿತ್ತವಸೆಳೆವಪ್ಸರ ಸ್ತ್ರೀಯರ |
ಹತ್ತು ಸಾವಿರ ಕೊಟ್ಟ ವರುಣ ದೇವ ಹರಿ ಭಕ್ತಿಯ ಮನದಿ ಬೆಳೆಸೆಂದ | ೧೦೪ |

ಪೊಳೆವ ನವರತ್ನದ ರಾಶಿಯ ತೆಗೆತೆಗೆದು ಉಳಿದ ಅಮರರಿಗೆ ಸಲಿಸಿದ |
ಉಳಿದ ಅಮರರಿಗೆ ಸಲಿಸಿದ ಸಮುದ್ರ ಕಳುಹಿದನವರ ಮನೆಗಳಿಗೆ | ೧೦೫ |

ಉನ್ನಂತ ನವರತ್ನಮಯವಾದ ಅರಮನೆಯ ಚೆನ್ನೇಮಗಳಿಂದ ವಿರಚಿಸಿ |
ತನ್ನ ಅಳಿಯಗೆ ಸ್ಥಿರವ ಮಾಡಿಕೊಟ್ಟ ಇನ್ನೊಂದು ಕಡೆಯಡಿ ಇಡದಂತೆ | ೧೦೬ |

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ ಜಯವಿತ್ತ ಕ್ಷೀರಾಂಬುಧಿಯಲ್ಲಿ |
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ ದಯದಿ ನಮ್ಮೆಲ್ಲರ ಸಲಹಲಿ | ೧೦೭ |

ಈ ಪದವ ಮಾಡಿದ ವಾದಿರಾಜೇಂದ್ರ ಮುನಿಗೆ ಶ್ರೀಪತಿಯಾದ ಹಯವದನ |
ತಾಪವ ಕಳೆದು ತನ್ನ ಶ್ರೀಚರಣ ಸಮೀಪದಲ್ಲಿಟ್ಟು ಸಲಹಲಿ | ೧೦೮ |

ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊOಡ ಲಕ್ಷ್ಮಿಕಾಂತನ ಕಂದನೆನಿಸಿದ |
ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿಪಂಥದಿ ಪೇಳಿದ ಪದವಿದು | ೧೦೯ |

ಶ್ರೀಯರಸ ಹಯವದನ ಪ್ರಿಯ ವಾದಿರಾಜರಾಯ ರಚಿಸಿದ ಪದವಿದು |
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿರಾಯಾಸದಿಂದ ಸುಖಿಪರು | ೧೧೦ |

ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ ಕ್ರಮದಿ ಮಾಡಿ ವಿನೋದಿಸುವ |
ನಮ್ಮನಾರಾಯಣಗೂ ಈ ರಮ್ಮೆಗಡಿಗಡಿಗೂ ಅಸುರಮೋಹನವೇ ನರನಟನೆ |೧೧೧|

ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು |
ವಧುಗಳಿಗೆ ವಾಲೆಭಾಗ್ಯ ದಿನದಿನಕ್ಕೆ ಹೆಚ್ಚುವದು ಮದನನಯ್ಯನ ಕೃಪೆಯಿಂದ|೧೧೨|

Leave a Reply

Your email address will not be published. Required fields are marked *

Translate »