ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವರ ಪ್ರದ ಹನುಮoತ ಕವಚ

ವರ ಪ್ರದ ಹನುಮoತ ಕವಚ

ಮಹಾಶೂರನಾಗಿ ಶರೀರದ ಎಲ್ಲ ಅ೦ಗಗಳನ್ನು “ಆತ್ಮಾವಾನನಾಗಿ ಯಾವಾಗಲೂ ರೋಗಗಳಿಂದಲೂ, ರಕ್ಷಿಸು. ಯಾವ ವಿದ್ವಾಂಸನು ಈ ಕವಚದ ಪಾಠವನ್ನು ಮಾಡುತ್ತಾನೋ ಭಕ್ತಿ ಮತ್ತು ಮುಕ್ತಿಗಳನ್ನು ಹೊಂದುತ್ತಾನೆ. ಪ್ರತಿ ದಿನವೂ ಸಾಧಕನು ಒಂದೇ ಒಂದು ವೇಳೆ ಅಥವಾ ಮೂರು ವೇಳೆಗಳಲ್ಲಿ ಅಥವಾ ಮೂರು ತಿಂಗಳವರೆಗೆ
ಪಠಿಸಿದರೆ ಕ್ಷಣಮಾತ್ರದಲ್ಲಿ ಶತ್ರುಗಳ ಮೇಲೆ ವಿಜಯವನ್ನು ಹೊಂದುವನು ಮತ್ತು ಲಕ್ಷ್ಮಿ ಪ್ರಾಪ್ತಿಯಾಗುವುದು. ಒಂದು ವೇಳೆ ಮಧ್ಯರಾತ್ರಿಯ ಸಮಯದಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಜಲದಲ್ಲಿ ಕುಳಿತು ಅಥವಾ ನೀರನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತು ಏಳು ಬಾರಿ ಈ ಕವಚವನ್ನು ಪಠಿಸಿದರೆ ಕ್ಷಯ, ಅಪಸ್ಮಾರ, ಕುಷ್ಠ ಮತ್ತು ಉಷ್ಣಜ್ವರದ ನಿವಾರಣೆಯಾಗುವುದು.

ಅಶ್ವತ್ಯಮೂಲೇರ್ಕವಾರೇ ಸಥಿತ್ವಾ ಪಠತಿ ಯಃ ಪ್ರಮಾನ್ ಅಚಲೋ ಶ್ರೀಯಮಾಪನೇತಿ ಸಂಗ್ರಾಮ ವಿಜಯಂ ತಥಾ

ಲಿಖಿತ್ವಾ ಪೂಜಯೇದ್ ಯಸ್ತು ಸರ್ವತ್ರ ವಿಜಯೀಭವೇತ್‌ಯಃ ಕರೆ ಧಾರಯೇನ್ನಿತ್ಯಂ ಸ ಪುಮಾನ್ ಶ್ರೀಯಮಾಪ್ನುಯಾತ್ ವಿವಾದ ದ್ಯೋತಕಾಲೆ ಚ ದ್ಯೋತೇ ರಾಜಕುಲೇ ರಣೇದಶವಾರಂ ಪಠೇತ್

ರಾತ್ರೋ ಮಿತಾಹಾರೋ ಜಿತೇಂದ್ರಿಯ: ವಿಜಯಂ ಲಭತೇ ಲೋಕೇ ಮಾನುಷೇಷು ನರಾಧಿಪಃ

🌺ಭಾನುವಾರದಂದು ಅಶ್ವತ್ಥ ವೃಕ್ಷದ ಬುಡದ ಬಳಿ ಕುಳಿತು ಈ ಕವಚವನ್ನು ಪಠಿಸಿದವನು ಸಂಗ್ರಾಮದಲ್ಲಿ ವಿಜಯವನ್ನು ಹೊ೦ದುವನು ಮತ್ತು ಅಚಲಳಾದ ಲಕ್ಷ್ಮಿಯನ್ನು ಹೊಂದುವನು. ಈ ಕವಚವನ್ನು ಬರೆದುಕೊಂಡು ಪೂಜಿಸಿದರೆ ಎಲ್ಲೆಲ್ಲೂ
ವಿಜಯ ಪ್ರಾಪ್ತಿಯಾಗುವುದು. ಈ ಕವಚವನ್ನು ಧರಿಸಿದರೆ ಲಕ್ಷ್ಮೀ ಪ್ರಾಪ್ತಿಯಾಗುವುದು. ಇದನ್ನು ಹತ್ತು ಸಲ ಪಠಿಸಿದರೆ ಎಲ್ಲದರಲ್ಲೂ ವಿಜಯವನು ಹೊಂದುವನು.

  ಶ್ರೀ ಕಾಳಿಕಾ ಅಷ್ಟಕಂ …!

ಭೂತಪ್ರೇತ ಮಹಾದುರ್ಗೆ ರಣೆ ಸಾಗರ ಸಂಪ್ಲವೇ ಸಿಂಹವ್ಯಾಘ್ರ ಭಯೇ ಚೋಗ್ರೆ ಶರ ಶತ್ರಾಸ್ತ್ರ ಪಾತನೆ ಶೃಂಖಲಾ ಬಂಧನ ಚೈವ ಕಾರಾಗ್ರಹ ನಿಯಂತ್ರಣೆ ಕಾಯಸ್ತೋಮ ವಯ್ನಿಚಕೆ ಕ್ಷೇತ್ರ ಘೋರೆ ಸುದಾರುಣೆ ಶೋಕ ಮರ್ಹಾಣೆ ಜೈವ ಬಾಲಗ್ರಹ ವಿನಾಶನರ್ಮ ಸರ್ವದಾ ತು ಪಠನಿತ್ಯಂ ಜಯಮಾಘ್ನುತ್ಯಸಂಶಯಮ್

🌺ಭೂತ, ಪ್ರೇತ, ಮಹಾದುಃಖ ರಣ, ಸಾಗರ, ಸಿಂಹ, ಹುಲಿ, ಶಸ್ತ್ರಾಸ್ತ್ರಗಳ ಮಧ್ಯೆ ಸಿಲುಕಿದ್ದಾಗ ಕೈಕೋಳ ಹಾಕಿಕೊಂಡು ಸೆರೆಮನೆಯಲ್ಲಿದ್ದಾಗ ಬೆಂಕಿಯಲ್ಲಿ ಸಿಕ್ಕಿಕೊಂಡಾಗ, ಶರೀರಕ್ಕೆ ನಾನಾ ರೀತಿ ಪೀಡೆಯುಂಟಾದಾಗ ಈ ಶೋಕಾದಿಗಳಿಂದಲೂ ಬ್ರಹ್ಮಕ್ಷಸ್ ಭಯವನ್ನು ನಿವಾರಿಸಲಿಕ್ಕೂ ಈ ಕವಚವನ್ನು ಪ್ರತಿ ದಿನವೂ ಪಠಿಸಬೇಕು,

  ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

ಭೂಜೆ ವ ವಸನೆ ರಕ್ತ ಕ್ಷೀಮೆ ಚ ತಾಲ ಪತ್ರಕೆ ತ್ರಿಗಂಧೇ ನಾಥ ಮಶೈವ ವಿಲಿಖ್ಯ ಧಾರಯೇನ್ನರ ಪಂಚಸಪ್ತತ್ರಿಲೋಹೈವಾಕಿ ಗೋಪಿತ ಕವಚ ಶುಭಮ್‌ಗಲೇ ಕಟಯೂಂ ಬಾಹುಮೂಲೆ ಕಂಠ ಶಿರಸಿ ಧಾಲಿಯಂತಮ್ ಸರ್ವಾನ್ ಕಾಮಾನ್ ವಾಪುಯಾತ್ ಸತ್ಯಂ ಶ್ರೀರಾಮ ಭಾಷಿತಂ.

🌺ಈ ಕವಚವನ್ನು ತ್ರಿಗಂಧದಿಂದ ಬರೆದು ಧರಿಸಬೇಕು. ಪಂಚಧಾತು, ತರಿಧಾರು ಸಪ್ತಧಾತುಗಳ ತಾಯಿತೆಯಲ್ಲಿಟ್ಟು ಪೂಜಿಸಿ, ಕತ್ತಿನಲ್ಲಿ, ಕಂಠಕ್ಕೆ ತೋಳಿಗೆ ಅಥವಾ ಉಡಿದಾರಕ್ಕೆ ಕಟ್ಟಿಕೊಂಡು ಧರಿಸಿದರೆ ಅವನ ಸಕಲ ಅಭಿಲಾಷೆಗಳು ಈಡೇರುವವು ಎಂದು ಶ್ರೀರಾಮನು ಹೇಳಿದನು.

  ಪುತ್ತೂರಿನ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನ

Leave a Reply

Your email address will not be published. Required fields are marked *

Translate »