ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹಾಭಾರತದಲ್ಲಿರುವ 9 ನೀತಿಸೂತ್ರ

  • ಮಹಾಭಾರತದಲ್ಲಿರುವ ನೀತಿಸೂತ್ರ

ನಿಮಗೆ ಮಹಾಭಾರತವನ್ನು ಓದಲು ಸಮಯವಿಲ್ಲದಿದ್ದರೆ, ಅದರಲ್ಲಿ ಕಾಣುವ ಒಂಬತ್ತು ಸಾರಗಳು ನಮ್ಮ ಜೀವನದಲ್ಲಿ ಉಪಯುಕ್ತವೆಂದು ಸಾಬೀತುಪಡಿಸಬಹುದು, ಖಂಡಿತವಾಗಿ ಓದಿ…

  1. ಮಕ್ಕಳ ಒಡ್ಡುವ ತಪ್ಪು ಬೇಡಿಕೆಗಳು ಮತ್ತು ಹಠಮಾರಿತನವನ್ನು ಸರಿಯಾದ ಸಮಯದಲ್ಲಿ ನಿಯಂತ್ರಿಸದಿದ್ದರೆ, ಅಂತಿಮವಾಗಿ ನೀವು ಅಸಹಾಯಕರಾಗುತ್ತೀರಿ = ಕೌರವರು.
  2. ನೀನು ಎಷ್ಟೇ ಬಲಶಾಲಿಯಾಗಿದ್ದರೂ ಅಧರ್ಮದಿಂದ ಇದ್ದರೆ – ನಿನ್ನ ಜ್ಞಾನ, ಅಸ್ತ್ರಬಲ, ಲಭಿಸಿರುವ ವರಗಳು ಎಲ್ಲವೂ ನಿಷ್ಫಲವಾಗುತ್ತದೆ = ಕರ್ಣ.
  3. ನಿಮ್ಮ ಮಕ್ಕಳು ತಾವು ಕಲಿತ ಶಿಕ್ಷಣವನ್ನು ದುರುಪಯೋಗಪಡಿಸಿಕೊಂಡು ತಮ್ಮನ್ನು ತಾವೇ ಸ್ವಯಂ ನಾಶಪಡಿಸಿಕೊಳ್ಳುವಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಲು ಬಿಡಬೇಡಿ = ಅಶ್ವತ್ಥಾಮ
  4. ಎಷ್ಟೇ ಜ್ಞಾನಿ, ಶೂರ, ದಯಾಳುವಾಗಿದ್ದರೂ, ಅನೀತಿವಂತರ ಮುಂದೆ ಮಾಡುವ ಪ್ರತಿಜ್ಞೆಗೆ ಬದ್ಧನಾಗಿ, ಸಂಪೂರ್ಣ ಅಸಹಾಯಕ ಸ್ಥಿತಿಗೆ ಶರಣಾಗಿ ಇಡೀ ಬದುಕನ್ನೇ ವ್ಯರ್ಥಮಾಡಿಕೊಳ್ಳಬೇಡಿ = ಭೀಷ್ಮ ಪಿತಾಮಹ.
  5. ಸಂಪತ್ತು, ಶಕ್ತಿ, ಅಧಿಕಾರ ಮತ್ತು ಅಧಿಕಾರದ ದುರುಪಯೋಗ, ದುಷ್ಟರೊಂದಿಗಿನ ಸಹವಾಸವು ಅಂತಿಮವಾಗಿ ಸ್ವಯಂ ನಾಶಕ್ಕೆ ಕಾರಣವಾಗುತ್ತದೆ = ದುರ್ಯೋಧನ.
  6. ಅಂಧ ವ್ಯಕ್ತಿಯ ಕೈಯಲ್ಲಿ – ಸಂಪತ್ತು, ಅಧಿಕಾರ, ಅಜ್ಞಾನ, ಮದ್ಯ, ಮೋಹ ಮತ್ತು ಕಾಮ ಸಿಕ್ಕಿಕೊಂಡರೆ ಸರ್ವನಾಶಕ್ಕೆ ಕಾರಣವಾಗುತ್ತದೆ = ಧೃತರಾಷ್ಟ್ರ
  7. ಒಬ್ಬ ವ್ಯಕ್ತಿಗೆ ಜ್ಞಾನ ಮತ್ತು ಬುದ್ಧಿವಂತಿಕೆ, ಸಂಯಮ ಇದ್ದರೆ, ಅವನು ಖಂಡಿತವಾಗಿಯೂ ಗೆಲ್ಲುತ್ತಾನೆ = ಅರ್ಜುನ
  8. ಮಾಡುವ ಮತ್ತು ಯೋಚಿಸುವ ಪ್ರತಿ ಕೆಲಸದಲ್ಲೂ ಕೆಟ್ಟಛಲ, ಕಪಟ ಮತ್ತು ಮೋಸವನ್ನು ಸೃಷ್ಟಿಸಿ ನೀವು ಯಾವಾಗಲೂ ಯಶಸ್ವಿಯಾಗಲು ಸಾಧ್ಯವಿಲ್ಲ = ಶಕುನಿ
  9. ನೀವು ನೀತಿ, ಧರ್ಮ ಮತ್ತು ಕರ್ಮವನ್ನು ಯಶಸ್ವಿಯಾಗಿ ಅನುಸರಿಸಿದರೆ, ಪ್ರಪಂಚದ ಯಾವುದೇ ಶಕ್ತಿಯು ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ = ಯುಧಿಷ್ಠಿರ.
  ನಾಗ ದೋಷ ಹೇಗೆ ಬರುತ್ತದೆ ..? ನಾಗ ದರ್ಶನ ಶುಭ ಅಶುಭ ಸೂಚನೆ ವಿವರ

ಈ ಒಂಬತ್ತು ನೀತಿ ಸೂತ್ರಗಳಿಂದ ಪಾಠ ಕಲಿಯಲು ಸಾಧ್ಯವಾಗದಿದ್ದರೆ ಜೀವನದಲ್ಲಿ ಮಹಾಭಾರತ ನಡೆಯುತ್ತದೆ.

🙏🙏🙏

Leave a Reply

Your email address will not be published. Required fields are marked *

Translate »