ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶೀಗಿ ಹುಣ್ಣಿಮೆ

🌺🌺🌺🌺🌺🌺
#ಶೀಗಿ #ಹುಣ್ಣಿಮೆ
🌺🌺🌺🌺🌺🌺
ಇತರ ಯಾವುದೇ ಸಂಪತ್ತು ಇರದಿದ್ದರೂ ಮನುಷ್ಯ ಬದುಕಬಲ್ಲ. ಆದರೆ ಹಸಿರು ಸಂಪತ್ತು ಇಲ್ಲದಿದ್ದರೆ ಈ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲಾರದು. ಪ್ರಕೃತಿಗೆ ವಿಮುಖರಾದರೆ ಭೂಮಂಡಲವೇ ಮರಳುಗಾಡು. ಅದಕ್ಕೇ ನಮ್ಮ ಪೂರ್ವಜರು ಎಲ್ಲಕ್ಕಿಂತ ಮೊದಲು ಪ್ರಕೃತಿಗೆ ಪ್ರಾಧಾನ್ಯತೆ ಕೊಟ್ಟಿದ್ದರು. ನಿಸರ್ಗದಿಂದಲೇ ಜಲ ಸಂಪತ್ತು, ಫಲ ಸಂಪತ್ತು, ಧಾನ್ಯ ಸಂಪತ್ತು, ಸಕಲ ಜೀವ ಸಂಪತ್ತು.

ಧಾನ್ಯ ಸಂಪತ್ತು ಎಂದರೆ ಬರೀ ಧಾನ್ಯವಲ್ಲ. ಅದು ಜೀವದ ಜೀವ. ಅನ್ನಬ್ರಹ್ಮ. ಜೀವಿಗಳ ಉಸಿರಿನ ಆಸರೆ. ಅಂಥ ಧಾನ್ಯಗಳನ್ನು ಪ್ರಕೃತಿಯ ಮಡಿಲಲ್ಲಿಬೆಳೆದು, ಸಂಭ್ರಮಿಸಿ ಭೂದೇವಿಗೆ ಕೃತಜ್ಞತೆಯನ್ನು ಸಲ್ಲಿಸುವ ಅಪೂರ್ವ ಘಳಿಗೆಯೇ ಶೀಗಿ ಹುಣ್ಣಿಮೆ.

ಮುಂಗಾರಿನ ಫಸಲು ರೈತನ ಮನೆ ತುಂಬುವ ಕಾಲವಿದು. ಜೋಳ, ಗೋವಿನ ಜೋಳ, ಸಜ್ಜೆ, ಹೆಸರು, ಸೂರ‍್ಯಕಾಂತಿ, ರಾಗಿ, ಭತ್ತ… ಹೀಗೆ ಅನೇಕ ಧಾನ್ಯಗಳ ರಾಶಿ ಮಾಡುವ ಕಾಲ. ರಾಶಿಯ ಸಂಭ್ರಮದೊಂದಿಗೆ ಚಳಿಗಾಲವನ್ನು ಸ್ವಾಗತಿಸುವ ಸಂಕ್ರಮಣದ ಕಾಲವೂ ಹೌದು. ಇದಕ್ಕೆ ಶೀಗಿ ಹುಣ್ಣಿಮೆಯ ಬೆಳದಿಂಗಳಿನ ಮೆರುಗು ಸೇರಿಕೊಂಡಾಗ ಅದು ನೀಡುವ ಸಂತೋಷವನ್ನು ಭೂ ತಾಯಿಯ ಮಡಿಲಿನಲ್ಲಿಯೇ ಸವಿಯಬೇಕು.
ಸಡಗರಕ್ಕೆ ಜತೆಯಾಗುವ ಸಂಪ್ರದಾಯ:
ಪ್ರಕೃತಿಯ ಆರಾಧನೆ ಹಾಗೂ ಸಂರಕ್ಷಣೆಯೇ ಶೀಗಿ ಹುಣ್ಣಿಮೆ ಆಚರಣೆಯ ಮೂಲ ಉದ್ದೇಶ. ಇದಕ್ಕೆ ಸಾಂಕೇತಿಕವಾಗಿ ಒಂದಿಷ್ಟು ಸಂಪ್ರದಾಯಗಳು, ಆಚರಣೆಗಳು ಜತೆಯಾಗುತ್ತವೆ. ರಾಶಿ ಮಾಡಿ ಧಾನ್ಯಗಳನ್ನು ಮನೆಗೆ ತುಂಬಿಕೊಳ್ಳುವ ತವಕದಲ್ಲಿರುವ ರೈತ ಕುಟುಂಬದವರು ಈ ವೇಳೆ ಸಡಗರದಿಂದಲೇ ಭೂದೇವಿಯ ಆರಾಧನೆಗೆ ಮುಂದಾಗುತ್ತಾರೆ.

  ತೆನಾಲಿ ರಾಮನನ್ನು ಹುಡುಕುವ ಕಥೆ

ಮನೆಯಲ್ಲಿಹೋಳಿಗೆ, ಕಡಬು, ಹುಗ್ಗಿ, ಜೋಳದ ವಡೆ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಖಡಕ್‌ ರೊಟ್ಟಿ, ಚಪಾತಿ, ನಾನಾ ರೀತಿಯ ಪಲ್ಯ, ಕೆನೆ ಮೊಸರು, ಬೆಣ್ಣೆ, ತುಪ್ಪ, ಬಗೆ ಬಗೆಯ ಚಟ್ನಿಗಳು… ಹೀಗೆ ಭೂರಿ ಭೋಜನವೇ ತಯಾರಾಗಿರುತ್ತದೆ. ಇವೆಲ್ಲವನ್ನೂ ಕಟ್ಟಿಕೊಂಡು, ಸಿಂಗರಿಸಿದ ಎತ್ತುಗಳೊಂದಿಗೆ ಚಕ್ಕಡಿ ಹೂಡಿಕೊಂಡು ಹೊಲಕ್ಕೆ ಹೋಗುವಾಗಿನ ಖುಷಿ ಇನ್ನೆಲ್ಲಿಯೂ ಸಿಗದು. ಈ ವೇಳೆ ಹಿರಿಯರು, ಮಕ್ಕಳಾದಿಯಾಗಿ ಎಲ್ಲರೂ ಸಾಂಪ್ರದಾಯಿಕ ಬಣ್ಣ ಬಣ್ಣದ ಬಟ್ಟೆ ತೊಟ್ಟು ಮಿರುಗುವುದನ್ನು ನಿಂತು ನೋಡಬೇಕು. ಪುರುಷರು ದಡಿ ಧೋತಿ, ಪಟಗಾ, ಜುರುಕಿ ಪಾದರಕ್ಷೆ, ಕೈಯಲ್ಲಿಕಡಗ, ಕೊರಳಲ್ಲಿಚೈನು, ಬೆರಳಲ್ಲಿಉಂಗುರ ತೊಟ್ಟು ಮೀಸೆ ತಿರುವುತ್ತ ಹೊರಟರೆ, ಮಹಿಳೆಯರು ರೇಷ್ಮೆ ಸೀರೆ, ಬೋರಮಾಳ, ಟಿಕ್ಕಿ, ನತ್ತು, ಡಾಬು, ಝುಮುಕಿ, ಕಾಲ್ಗೆಜ್ಜೆ ಸೇರಿದಂತೆ ಸರ್ವಾಲಂಕಾರ ಭೂಷಿತೆಯರಾಗಿ ಹೊಲಕ್ಕೆ ಹೋಗುತ್ತಾರೆ.
ಅಲ್ಲಿಗೆ ಹೋದ ಮೇಲೆ ಭೂದೇವಿಯನ್ನು ಪೂಜೆ ಮಾಡುವುದು ಮುಖ್ಯ ಘಟ್ಟ. ಸಾಂಪ್ರದಾಯಿಕವಾಗಿ ಭಕ್ತಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ಮನೆಯಿಂದ ತಂದ ನಾನಾ ಖಾದ್ಯಗಳನ್ನು ನೈವೇದ್ಯ ಮಾಡುತ್ತಾರೆ. ನಂತರ ಆ ನೈವೇದ್ಯವನ್ನು ಹೊಲದ ಎಲ್ಲದಿಕ್ಕುಗಳಲ್ಲಿಯೂ ಚೆಲ್ಲುತ್ತಾರೆ. ಅದಕ್ಕೆ ‘ಚರಗ ಚೆಲ್ಲುವುದು’ ಎಂಬ ಹೆಸರು. ಇದಾದ ಮೇಲೆ ಎಲ್ಲರೂ ಸೇರಿ ಒಟ್ಟಾಗಿ ಹಬ್ಬದೂಟವನ್ನು ಮಾಡಿ, ಇಡೀ ದಿನ ಪ್ರಕೃತಿಯ ಮಡಿಲಲ್ಲಿಯೇ ನಲಿದು ಸಂಜೆ ಮನೆಗೆ ಮರಳುತ್ತಾರೆ.

  ಪುತ್ತೂರಿನ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನ

ಶೀಗಿ ಹುಣ್ಣಿಮೆಯ ಸಂದರ್ಭದಲ್ಲಿಹೊಸ ಬಟ್ಟೆ ತೊಟ್ಟು, ಹಬ್ಬದೂಟ ಮಾಡಿದರೆ ಸಾಲದು. ಈ ಆಚರಣೆಯ ಹಿಂದಿನ ಉದ್ದೇಶವೇನು, ಅರ್ಥವೇನು, ಮಹತ್ವವೇನು? ಅವುಗಳನ್ನು ಆಚರಣೆಗೆ ತರುವುದು ಹೇಗೆ ಎಂಬುದನ್ನು ತಿಳಿದುಕೊಂಡರೆ ಆಚರಣೆಗೂ ಒಂದು ರೀತಿಯ ಸಾರ್ಥಕತೆ.

ಅನ್ನವೇ ಜಗತ್ತಿಗೆ ಆಸರೆ. ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಯೋಗಾಲಯದಲ್ಲಿಧಾನ್ಯಗಳನ್ನು ತಯಾರಿಸಲು ಆಗದು. ಅದಕ್ಕೆ ಭೂಮಿ, ನೀರು, ಸ್ವಚ್ಛ ಗಾಳಿ ಬೇಕು. ಇದಕ್ಕಾಗಿ ಇತ್ತೀಚೆಗೆ ‘ಪ್ರಕೃತಿ ಉಳಿಸಿ’, ‘ಕಾವೇರಿ ಕೂಗು’ ಎಂಬಂತಹ ಅನೇಕ ರೀತಿಯ ಪ್ರಕೃತಿ ರಕ್ಷಣೆಯ ಅಭಿಯಾನಗಳನ್ನು ನೋಡಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ನಿಸರ್ಗದ ಮಹತ್ವವನ್ನು ಅರಿತಿದ್ದರು. ಆದ್ದರಿಂದಲೇ ಶೀಗಿ ಹುಣ್ಣಿಮೆಯಂಥ ಪ್ರಕೃತಿ ಆರಾಧನೆಯ ಅನೇಕ ಹಬ್ಬಗಳು ನಮ್ಮ ಸಂಪ್ರದಾಯದಲ್ಲಿಧಾರಾಳವಾಗಿವೆ

ಜಾಗತಿಕ ತಾಪಮಾನ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ, ಹಿಂದೆಂದಿಗಿಂತಲೂ ಈಗ ನಮ್ಮ ಸಂಸ್ಕೃತಿ, ಪರಂಪರೆ, ಹಬ್ಬ ಹರಿದಿನಗಳ ಕುರಿತು ಜಾಗೃತಿ ಹಾಗೂ ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯ ಇದೆ. ಏಕೆಂದರೆ ಅವೆಲ್ಲವೂ ಪ್ರಕೃತಿಯನ್ನೇ ಆಧರಿಸಿ, ಆರಾಧಿಸಿ, ಅದನ್ನು ಸಂರಕ್ಷಿಸುವ ಉದ್ದೇಶಗಳನ್ನೇ ಹೊಂದಿವೆ. ಭೂಮಿ ಬೆಂಗಾಡಾಗುವ ಮೊದಲು ಈಗಿನ ಪೀಳಿಗೆಗೆ ಪ್ರಕೃತಿ ರಕ್ಷಣೆಯ ಬಗ್ಗೆ ತಿಳಿಹೇಳಬೇಕಿದೆ.

ಹಸಿರು ಸಿರಿಯೆಂಬುದು ಜೀವ ಜಗದ ತೊಟ್ಟಿಲು. ಅನ್ನ , ನೀರು, ಗಾಳಿಯ ಮೂಲವೇ ಈ ಪ್ರಕೃತಿ. ಅದು ಜೀವಕ್ಕೆ ಜೀವ ತುಂಬುತ್ತದೆ. ಮನಸ್ಸಿಗೆ ಸಂತೋಷ ಕೊಡುತ್ತದೆ. ಹಸಿರು ಸಂಪತ್ತು ತುಂಬಿ ತುಳುಕುತ್ತಿದ್ದರೆ ಯಾರೂ ಬಡವರಾಗಿ ಉಳಿಯುವುದಿಲ್ಲ. ನಿಸರ್ಗದಲ್ಲಿಯೇ ಸಂಪತ್ತು, ಸಿರಿ, ಉಸಿರನ್ನು ಕಂಡಾಗ ಜಗತ್ತಿಗೇ ಶ್ರೀಮಂತಿಕೆ.

  Surya Grahana ಸೂರ್ಯ ಗ್ರಹಣ 25.10.22  ಮಂಗಳವಾರ

ಶೀಗಿ ಹುಣ್ಣಿಮೆ ಕೂಡ ಈ ಭೂ ಸಂಪತ್ತು, ಜಲ ಸಂಪತ್ತು, ಧಾನ್ಯ ಸಂಪತ್ತು ಹಾಗೂ ಕೃತಜ್ಞತಾ ಭಾವ ಸಂಪತ್ತಿನ ಮಹತ್ವ ಹೇಳುವ ಉದ್ದೇಶದ ಅಪೂರ್ವ ಆಚರಣೆ. ಇದರ ಜತೆ ನಿಸರ್ಗ ರಕ್ಷಣೆ ಬಗೆಗಿನ ಚಿಂತನೆಗೆ ಹಚ್ಚುವ ಸುಸಮಯ. ಈ ವೇಳೆ ಅಂಥದೊಂದು ಸಂರಕ್ಷಣೆಯ ಮಹಾಕಾರ್ಯ ಜಗತ್ತಿನಾದ್ಯಂತ ಅಕ್ಷರಶಃ ಕಾರ್ಯರೂಪಕ್ಕೆ ಬರಬೇಕಿದೆ. ಆಗಲೇ ಆಚರಣೆಗೊಂದು ಅರ್ಥ.

ಕೃತಜ್ಞತೆಯ ಸಂದೇಶ:
ಅನ್ನ ನೀಡಿ, ಇಡೀ ಜೀವ ಸಂಕುಲವನ್ನು ಪೋಷಿಸುತ್ತಿರುವ ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಸುಸಂದರ್ಭವೇ ಶೀಗಿ ಹುಣ್ಣಿಮೆ. ‘ಜನ್ಮ ನೀಡಿದವರಿಗೆ, ಅನ್ನ ನೀಡಿದವರಿಗೆ, ಪೋಷಣೆ ಮಾಡಿದವರಿಗೆ, ಆಸರೆಯಾದವರಿಗೆ, ಉಪಕಾರ ಮಾಡಿದವರಿಗೆ ಕೃತಜ್ಞರಾಗಿ ಇರೋಣ’ ಎಂಬ ಸಂದೇಶ ಸಾರುತ್ತದೆ ಈ ಆಚರಣೆ. ಹೀಗಾಗಿ ಸಕಲ ಜೀವಗಳ ಜೀವಸೆಲೆಯಾಗಿರುವ ಭೂಮಿಗೆ ಈ ವೇಳೆ ವಿಶೇಷವಾಗಿ ಪೂಜೆ, ನೈವೇದ್ಯ ಹಾಗೂ ಕೃತಜ್ಞತೆ ಸಲ್ಲಿಕೆಯಾಗುತ್ತದೆ.

Leave a Reply

Your email address will not be published. Required fields are marked *

Translate »