ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸೋಮವಾರ ಶಿವಪೂಜೆಯ ಮಹತ್ವ

ಸೋಮವಾರ ಶಿವಪೂಜೆಯ ಮಹತ್ವ ‌ ‌

*ಶಿವಲೀಲಾಮೃತ ..!*

ಭಗವಂತ ಈಶ್ವರನನ್ನು ಸೋಮವಾರ ಪೂಜಿಸಲಾಗುತ್ತದೆ, ನಾವೂ ಸಹ ಪ್ರತಿ ಸೋಮವಾರದಂದು ಶಿವನನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸಿದರೆ, ಭಗವಾನ್‌ ಪರಮೇಶ್ವರನು ಖಂಡಿತವಾಗಿಯೂ ನಮ್ಮ ಬಗ್ಗೆ ಸಂತೋಷಪಡುತ್ತಾನೆ. ಶಿವನು ಕಮಲದ ಹೃದಯದವನಾಗಿರುವುದರಿಂದ ಮತ್ತು ಸದಾಶಿವನು ಯಾವಾಗಲೂ ತನ್ನ ಭಕ್ತರಿಗೆ ದಯೆ ತೋರುತ್ತಿರುವುದರಿಂದ ಅವನನ್ನು ಮೆಚ್ಚಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ನಾವು ಪಶುಪತಿನಾಥನಿಗೆ ಪ್ರತಿ ಸೋಮವಾರ ಪ್ರಾಮಾಣಿಕ ಹೃದಯದಿಂದ ಲೋಟಾ ನೀರನ್ನು ಅರ್ಪಿಸಿದರೂ ಸಾಕು ಅವನು ಸಂತೋಷಗೊಳ್ಳುವನು.

ಇದು ವಿಶೇಷ ಫಲವನ್ನು ನೀಡುವುದು

ಶಿವನ ಪೂಜೆಯಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಎಕ್ಕದ ಹೂವು, ಬಿಲ್ವಪತ್ರೆ, ಮುಂತಾದ ಪ್ರಮುಖ ವಸ್ತುಗಳನ್ನು ಯಾವುದೇ ದೇವತೆಗೆ ಅರ್ಪಿಸದೇ ಭಗವಾನ್‌ ಶಿವನಿಗೆ ಅರ್ಪಿಸಬೇಕು. ಅದೇ ರೀತಿ, ಶಿವನ ಪೂಜೆಯಲ್ಲಿ ಈ ವಸ್ತುಗಳನ್ನು ಬಳಸುವುದರಿಂದ ನಾವು ಆ ಶಿವನಿಂದ ವಿಶೇಷ ಫಲವನ್ನು ಪಡೆದುಕೊಳ್ಳುತ್ತೇವೆ. ಶಿವನಿಗೆ ಪೂಜೆಯಲ್ಲಿ ಅರಿಶಿನ ಮತ್ತು ಕುಂಕುಮ ನಿಷಿದ್ಧ ವಾಗಿದೆ

ನಮ್ಮೆಲ್ಲಾ ಬಯಕೆ ಗಳ ಈಡೇರಿಸುವುದು

ಶಿವ ಪೂಜೆಯಲ್ಲಿ ಶಿವನಿಗೆ ಅಭಿಷೇಕವನ್ನು ಇವುಗಳಿಂದ ಮಾಡಬೇಕು. ನೀರು, ಹಾಲು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆ, ಸುಗಂಧ ದ್ರವ್ಯ, ಶ್ರೀಗಂಧದ ಪುಡಿ, ಕೇಸರಿ, ಇಕ್ಷುರಸ ಇವುಗಳಿಂದ ಅಭಿಷೇಕ ಮಾಡಬೇಕು. ಈ ಎಲ್ಲಾ ವಸ್ತುಗಳಿಂದ ಶಿವನಿಗೆ ಅಭಿಷೇಕ ಮಾಡಬಹುದು. ಈ ವಸ್ತುಗಳನ್ನು ಒಂದೊಂದಾಗಿ ಅರ್ಪಿಸಬಹುದು. ಈ ವಸ್ತುಗಳಿಂದ ಶಿವಲಿಂಗವನ್ನು ಅಭಿಷೇಕ ಮಾಡುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.

  ಮಹಾ ಶಿವರಾತ್ರಿ ಹಬ್ಬದ ಪೂಜೆಯನ್ನು ಮಾಡುವ ವಿಧಾನ

*​ಶಿವ ಪೂಜೆ ಯ ಸಾಮಾನ್ಯ ವಿಧಿ

ಶಿವನನ್ನು ಪೂಜಿಸಲು ಬಯಸುವವರು ಸೋಮವಾರದ ದಿನ, ಬೆಳಗ್ಗೆ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿಗಳಿಂದ ನಿವೃತ್ತಿ ಹೊಂದಿ ಶುದ್ಧರಾಗಬೇಕು. ನಂತರ, ಮನೆಯ ದೇವ ಮಂದಿರದಲ್ಲಿ ಅಥವಾ ಶಿವ ದೇವಸ್ಥಾನಕ್ಕೆ ಹೋಗಿ. ಶಿವನೊಂದಿಗೆ ಪಾರ್ವತಿ ಮತ್ತು ನಂದಿ ದೇವರಿಗೆ ಗಂಗಾಜಲ ಅಥವಾ ಪವಿತ್ರ ನೀರನ್ನು ಅರ್ಪಿಸಿ. ನೀರು ಅರ್ಪಿಸಿದ ನಂತರ, ಶಿವಲಿಂಗಕ್ಕೆ ಶ್ರೀಗಂಧದ ಲೇಪನ, ಅಕ್ಕಿ, ಬಿಲ್ವಪತ್ರೆ, ಎಕ್ಕದ ಹೂಗಳು, ಮತ್ತು ಧಾತುರ ಅರ್ಪಿಸಿ.

​ಈ ಮಂತ್ರವನ್ನು ಪಠಿಸಿ
ಸೋಮವಾರ ಶಿವಪೂಜೆಯಲ್ಲಿ “ಓಂ ನಮಃ ಶಿವಾಯ” ಮಂತ್ರ ಜಪಿಸಬೇಕು. ನಂತರ ‘ರೂಪ ದೇಹಿ ಜಯಂ ದೇಹಿ ಭಾಗ್ಯಂ ದೇಹಿ ಮಹೇಶ್ವರಃ|. ಪುತ್ರಾನ್‌ ದೇಹಿ ಧನಂ ದೇಹಿ ಸರ್ವಾಂಕಾಮಾಂಶ್ಚ ದೇಹಿ” ಮಂತ್ರ ಪಠಿಸಿ. ಶಿವಲಿಂಗಕ್ಕೆ ಮತ್ತೆ ನೀರು ಅರ್ಪಿಸಿ. ನಂತರ, ಹೂವುಗಳನ್ನು,ಬಿಲ್ವಪತ್ರೆ, ಅಕ್ಷತೆ, ಧಾತುರ, ಎಕ್ಕದ ಹೂ, ಅರ್ಪಿಸಿ, ನಂತರ ಧೂಪ – ದೀಪ ಬೆಳಗಿಸಿ. ನಂತರ, ಭೋಲೆನಾಥನಿಗೆ ಆರತಿ ಮಾಡಿ.

  ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು

ಪೂಜಾ ಸಮಾಪ್ತಿ ಮಂತ್ರ
ಆರತಿ ಮಾಡಿದ ನಂತರ, ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹಾರಂ | ಸದಾ ವಸಂತಂ ಹೃದಯಾವಿಂದೇ ಭಂವ ಭವಾನಿ ಸಹಿತಂ ನಮಾಮಿ || ಈ ಮಂತ್ರ ೫ ಬಾರಿ ಪಠಿಸಿ. ಅಂತಿಮವಾಗಿ, ನಿಮ್ಮ ಎಲ್ಲಾ ತೊಂದರೆಗಳನ್ನು ತೆಗೆದುಹಾಕಿ , ಸಂತೋಷ, ಮತ್ತು ಸಮೃದ್ಧಿಯ ಆಶೀರ್ವಾದವನ್ನೀಡುವಂತೆ ಭಗವಾನ್‌ ಶಿವನಿಗೆ ಪ್ರಾರ್ಥಿಸಿ. ಪೂಜಿಸುವಾಗ, ಯಾವುದೇ ವ್ಯಕ್ತಿಯ ಬಗ್ಗೆ ಯಾವುದೇ ರೀತಿಯ ಮೋಸ ಅಥವಾ ಅಸೂಯೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಶಿವನನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸಿ. ಜೀವನದಲ್ಲಿ ಬರುವ ಎಲ್ಲಾ ತೊಂದರೆ ಅವನು ನಿವಾರಿಸುತ್ತಾನೆ.

ಶಿವನ ಪ್ರಸನ್ನತೇಗೇ
ಜ್ಯೋತಿಷ್ಯದ ಪ್ರಕಾರ, ನಾವು ಪ್ರತಿ ಸೋಮವಾರ ಈಶ್ವರನನ್ನು ತಪ್ಪದೇ ಪೂಜಿಸುತ್ತಿದ್ದರೆ, ಸೋಮವಾರ ಉತ್ತರ ದಿಕ್ಕನ್ನು ಎದುರಿಸಿ ಶಿವನನ್ನು ಪೂಜಿಸಿ, ಅಥವಾ ಅವನನ್ನು ಧ್ಯಾನಿಸಿ. ನಂತರ ಪ್ರತಿ ಸೋಮವಾರ, ಶಿವಪಂಚಾಕ್ಷರಿ ಮಂತ್ರವಾದ, ‘ಓಂ ನಮಃ ಶಿವಾಯ’ ಮಂತ್ರ ಜಪಿಸಿ, ಈ ಮಂತ್ರ ಕ್ರಮವಾಗಿ, 21, 27, 54 ಅಥವಾ 108 ಬಾರಿ ಜಪಿಸಬಹುದು, ಶಿವ ಪ್ರಸನ್ನ ಆಗುವುದರಲ್ಲಿ ಸಂಶಯವಿಲ್ಲ.

  ಕಣ್ಣಾ ಮುಚ್ಚಾಲೆ ಹಾಡಿಗೆ ಒಳ ಅರ್ಥ…!

*​ಮಾನಸಿಕ ನೆಮ್ಮದಿ ಗಾಗಿ ****,
ಪ್ರತಿ ಸೋಮವಾರ, ದೇವರಿಗೆ ನೀರು ಅರ್ಪಿಸಲು ಹೋದಾಗ, ಹಾಲಿನಲ್ಲಿ ದಾಲ್ಚಿನಿಯನ್ನು ಬೆರೆಸಿ , ಶಿವಲಿಂಗಕ್ಕೆ ಅಭಿಷೇಕ ಮಾಡಿ, ಇದು ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುವದು .ಮತ್ತು ಕೆಲಸ,ಕಾಯ೯ ಗಳಲ್ಲಿ ಯಶಸ್ಸು ಪಡೆಯಬಹುದು. ಇದಲ್ಲದೇ, ಶಿವನಿಗೆ ತುಳಸಿ ಎಲೇಯನ್ನು ಅರ್ಪಿಸಬಾರದು. , ಈ ದಿನದಂದು ‘ದಾರಿದ್ರದಹನ ಶಿವ ಸ್ತೋತ್ರ’ ಪಠಿಸಿ, ಇದು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ

ಆತ್ಮವಿಶ್ವಾಸ ಹೆಚ್ಚಿಸಿ ಚಂದ್ರನ ಸ್ಥಾನ ಬಲವಾಗುತ್ತದೆ ಸೋಮವಾರದಂದು ನಾವು ಶಂಕರನನ್ನು ಶುದ್ಧ ಹೃದಯದಿಂದ ಪೂಜಿಸಬೇಕು. ಈ ದಿನ ನಾವು ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ಕುಳಿತು ‘ಶಿವ ರಕ್ಷಾ ಸ್ತೋತ್ರ’ ಓದಬೇಕು ಇದು ನಮ್ಮಲ್ಲಿ ವಿಶ್ವಾಸವನ್ನು ತುಂಬುತ್ತದೆ. ಓಂ ನಮೋ ಭಗವತೇ ವಾಸುದೇವಾಯ ಓಂ ನಮಃ ಶಿವಾಯ. ಸವೇ೯ ಜನಃ ಸುಖೀನೋ ಭವಂತು

Leave a Reply

Your email address will not be published. Required fields are marked *

Translate »