ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಾಯತ್ರಿ ಮಂತ್ರ

✨ಗಾಯತ್ರಿ ಮಂತ್ರ✨
🕉️🕉️🕉️

ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ
ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಅರ್ಥ:-
ಗಾಯತ್ರಿ ಮಂತ್ರದ ಪ್ರತಿ ಅಕ್ಷರದ ಉಚ್ಚಾರಣೆಯು ದೇವತೆಯನ್ನು ಆಹ್ವಾನಿಸುತ್ತದೆ. ಗಾಯತ್ರಿ ಮಂತ್ರದ ಇಪ್ಪತ್ತನಾಲ್ಕು ಅಕ್ಷರಗಳು ಇಪ್ಪತ್ನಾಲ್ಕು ದೇವತೆಗಳನ್ನು ಉಲ್ಲೇಖಿಸುತ್ತದೆ. ಅವುಗಳಿಗೆ ಇಪ್ಪತ್ತನಾಲ್ಕು ಜಾಗೃತ ಶಕ್ತಿಗಳಿವೆ. ಗಾಯತ್ರಿ ಮಂತ್ರದ ಇಪ್ಪತ್ತನಾಲ್ಕು ಅಕ್ಷರಗಳು 24 ಶಕ್ತಿ ಬೀಜಗಳಾಗಿವೆ. ಗಾಯತ್ರಿ ಮಂತ್ರವನ್ನು ಪೂಜೆಯೊಂದಿಗೆ ಜಪಿಸುವುದರಿಂದ ಶಕ್ತಿಯೊಂದಿಗೆ ಸಿದ್ಧಿಗಳು ಪ್ರಾಪ್ತವಾಗುತ್ತದೆ…

ಭೂರ್ಭುವಃ ಸ್ವಃ: ಭೂ ಎಂದರೆ ಭೂಮಿ, ರ್ಭುವಃ ಎಂದರೆ ಬಾಹ್ಯಾಕಾಶ ಮತ್ತು ಸ್ವಃ ಎಂದರೆ ಸ್ವರ್ಗ.

  ಅಮೃತಸಂಜೀವನ ಧನ್ವಂತರಿ ಸ್ತೋತ್ರ

ತತ್ಸವಿತುರ್ವರೇಣ್ಯಂ: ತಃ ಎಂದರೆ ಪರಮಾತ್ಮ ಅಥವಾ ಬ್ರಹ್ಮ, ಸವಿತುಃ ಎಂದರೆ ದೇವರು ಅಥವಾ ಬ್ರಹ್ಮಾಂಡದ ಸೃಷ್ಟಿಕರ್ತ, ವರೇಣ್ಯಂ ಎಂದರೆ ಆರಾಧನೀಯ.

ಭರ್ಗೋ: ಅಜ್ಞಾನ ಮತ್ತು ಪಾಪವನ್ನು ಹೋಗಲಾಡಿಸುವವನು.

ದೇವಸ್ಯ: ಜ್ಞಾನದ ದೇವರ ರೂಪ.

ಧೀಮಹಿ ಧಿಯೋ: ನಾವು ಬುದ್ಧಿ ಮತ್ತು ಬುದ್ಧಿವಂತಿಕೆಯನ್ನು ಧ್ಯಾನಿಸುತ್ತೇವೆ.

ಯೋ ನಃ: ನಾವು.

ಪ್ರಚೋದಯಾತ್: ಪ್ರಕಶಿಸು.

ಓಂ : ಭಗವಂತನ ರಕ್ಷಕ, ಭೂ: ಜೀವನಾಶಕ, ಭುವಃ: ದುಃಖ ವಿನಾಶಕ, ಸ್ವಃ: ಸಂತೋಷದ ರೂಪ, ತತ್: ಅದು, ಸವಿತುಃ: ನಿರ್ಮಾಪಕ, ಪ್ರಕಾಶಕ, ಪ್ರೇರಕ, ವರೇಣ್ಯಂ: ಆಯ್ಕೆ ಯೋಗ್ಯ, ಭರ್ಗೋ: ಶುದ್ಧ ವಿಜ್ಞಾನ ರೂಪ, ದೇವಸ್ಯ: ದೇವನಿಗೆ, ಧೀಮಹಿ: ನಾವು ಧ್ಯಾನ ಮಾಡುತ್ತೇವೆ, ಧಿಯೋ: ಬುದ್ಧಿಶಕ್ತಿ, ಯೋ: ಇದು, ನಃ ನಮ್ಮದು, ಪ್ರಚೋದಯಾತ್: ಶುಭ ಕಾರ್ಯಗಳಲ್ಲಿ ನಮ್ಮನ್ನು ಪ್ರೇರೇಪಿಸುತ್ತದೆ…

  ಶ್ರೀಶಿಂಶುಮಾರರೂಪಿ ಭಗವಂತನ ಅವತಾರ ಮತ್ತು ಸ್ತೋತ್ರ ಮಹಾತ್ಮೆ

✨ಯಜ್ಜೋಪವಿತ ಧಾರಣೆ ✨

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇಃ ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ…

||ಓಂ ನಮೋ ನಾರಾಯಣಾಯ ನಮಃ ||

Leave a Reply

Your email address will not be published. Required fields are marked *

Translate »