ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆರೋಗ್ಯಕ್ಕಾಗಿ ಯೋಗ ವಿದ್ಯೆ ಬಗ್ಗೆ ತಿಳಿಯಿರಿ

ಜಗತ್ತಿಗೆ ಮನಶಾಂತಿ ಮತ್ತು ವ್ಯಾಧಿಮುಕ್ತ ಜೀವನವನ್ನು ನೀಡುವ ಯೋಗವಿದ್ಯೆ …!

ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೆ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಸಂಪೂರ್ಣ ಮಾನವಜಾತಿಯ ಕಲ್ಯಾಣವನ್ನು ಇಚ್ಛಿಸುವ ಒಂದು ಈಶ್ವರೀ ವರದಾನವಾಗಿದೆ. ಸಂಸಾರರೂಪಿ ಒಲೆಯಲ್ಲಿ ಬೆಂದುಹೋಗಿರುವವರಿಗೆ ಮನಃಶಾಂತಿಯನ್ನು ನೀಡುವ, ವ್ಯಾಧಿಗ್ರಸ್ತರನ್ನು ಶಾರೀರಿಕ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಗೊಳಿಸುವ, ಯೋಗಸಾಧಕರ ಜೀವವನ್ನು ಶಿವನೊಂದಿಗೆ ಜೋಡಿಸುವ, ಮಾನವನ ಮೋಕ್ಷಪ್ರಾಪ್ತಿಯ ಅಂತಿಮ ಇಚ್ಛೆಯನ್ನು ಪೂರ್ಣಗೊಳಿಸುವ ಯೋಗ ವಿದ್ಯೆ ಇದಾಗಿದೆ.

ನಮ್ಮ ಪರೋಪಕಾರಿ ಪೂರ್ವಜರು ಜಗತ್ತಿನ ಕಲ್ಯಾಣಕ್ಕಾಗಿ ಜೋಪಾನ ಮಾಡಿಟ್ಟಿರುವ ಅಮೂಲ್ಯವಾದ ಖಜಾನೆ ಇದಾಗಿದೆ. ಇಂತಹ ಅಮೂಲ್ಯವಾದ ಬೊಕ್ಕಸದ ವಾರಸುದಾರರು ನಾವಾಗಿದ್ದು ಈ ಯೋಗಭೂಮಿಯಲ್ಲಿ ನಾವು ಜನ್ಮ ಪಡೆದಿರುವುದು ನಮ್ಮ ಸೌಭಾಗ್ಯವಾಗಿದೆ; ಆದರೂ ಬಹಳಷ್ಟು ಭಾರತೀಯರು ಇಂದು ಕೂಡ ಯೋಗವಿದ್ಯೆಯಿಂದ ದೂರವಿದ್ದಾರೆ, ಅದು ಅವರ ದುರ್ದೈವವಾಗಿದೆ. ಜಗತ್ತಿನ ಇತರ ಅನೇಕ ರಾಷ್ಟ್ರಗಳು ಮಾತ್ರ ಯೋಗದ ಬೊಕ್ಕಸದಿಂದ ಸಾಕಷ್ಟು ಲಾಭ ಪಡೆದುಕೊಂಡಿವೆ ಹಾಗೂ ತೆಗೆದುಕೊಳ್ಳುತ್ತಿವೆ. ಭೋಗವಾದ, ಭೌತಿಕವಾದ ಹಾಗೂ ಅನೇಕ ಪ್ರಕಾರದ ವ್ಯಾಧಿಗಳಿಂದ ನರಳುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಜನರಿಗೆ ಮನಃಶಾಂತಿ ಮತ್ತು ನಿರೋಗಿ ಜೀವನ ಬೇಕಾಗಿದೆ. ಅದಕ್ಕಾಗಿ ಸಂಪೂರ್ಣ ಜಗತ್ತು ಭಾರತದ ಕಡೆಗೆ ಆಶೆಯಿಂದ ನೋಡುತ್ತಿದೆ; ಏಕೆಂದರೆ ಯೋಗವಿದ್ಯೆಯ ಹಾಗೆ ರಾಮಬಾಣ ಔಷಧವಿರುವ ಭಾರತದ ಹೊರತು ಇತರ ಯಾವುದೇ ದೇಶವು ಜಗತ್ತಿಗೆ ಮನಃಶಾಂತಿ ಮತ್ತು ವ್ಯಾಧಿಮುಕ್ತ ಜೀವನವನ್ನು ನೀಡಲು ಸಾಧ್ಯವಿಲ್ಲ. ಭಾರತೀಯ ಯೋಗವಿದ್ಯೆಯಲ್ಲಿ ಇಷ್ಟು ದೊಡ್ಡ ದಿವ್ಯ ಸಾಮರ್ಥ್ಯ ಹಾಗೂ ಕ್ಷಮತೆಯಿದೆ, ಎಂಬುದನ್ನು ವಿದೇಶದ ಪಂಡಿತರು ಪ್ರತ್ಯಕ್ಷ ಅನೂಭೂತಿ ಮತ್ತು ಅನುಭವವನ್ನು ಪಡೆದಿದ್ದಾರೆ.

  ದಿನಕ್ಕೊಂದು ಯೋಗಾಸನ - " ಸೂರ್ಯ ನಮಸ್ಕಾರ "

ದುರ್ಬಲವಾದ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಯೋಗದಲ್ಲಿದೆ ರಾಸಾಯನಿಕ ವಿಷಯುಕ್ತ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಿ ಬೆಳೆಸಿದ ದವಸ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಇತ್ಯಾದಿ ತಿಂದು ಕ್ರಮೇಣ ನಮ್ಮ ಶರೀರವು ವ್ಯಾಧಿಗೊಳಗಾಗುತ್ತಿದೆ. ಆದ್ದರಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ದರ್ಬಲತೆಯೂ ಹೆಚ್ಚಾಗಿದೆ, ಎಂಬುದು ಹೆಚ್ಚಿನ ಜನರಿಗೆ ತಿಳಿಯುವುದಿಲ್ಲ. ಹೀಗಿರುವಾಗ ಈ ಯೋಗವಿದ್ಯೆಯು ತುಂಬಾ ಉಪಯುಕ್ತವೆನಿಸುತ್ತದೆ. ವಿಷಯುಕ್ತ ದ್ರವ್ಯಗಳನ್ನು ಹೊರಗೆ ಹಾಕಿ ದುರ್ಬಲ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಯೋಗಾಭ್ಯಾಸದಲ್ಲಿದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »