ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗುರು ಗಳೆಂದರೆ ಯಾರು? – ಗುರುಪೂರ್ಣಿಮೆ ವಿಶೇಷ

ಗುರುಪೂರ್ಣಿಮೆ: ಸಾಂಧು-ಸಂತರ ಬಳಗದ ಎಲ್ಲಾ ಸಹೃದಯರಿಗೂ ಗುರುಪೂರ್ಣಿಮಾ ಶುಭಾಶಯಗಳು.

ಗುರುಗಳೆಂದರೆ ಇವರು: 👇
🌷 ಮೋಹ, ಅವಿದ್ಯೆ, ಅಜ್ಞಾನದ ಅಂಧಕಾರದಲ್ಲಿ ಮುಳುಗಿ, ಕಲುಷಿತಗೊಂಡಿರುವ ಮನಸ್ಸನ್ನು ಸಂಸ್ಕರಣ ಮಾಡಿ, ಜ್ಞಾನ, ವಿದ್ಯೆ, ವಿವೇಕದ ಜ್ಯೋತಿ ಬೆಳಗಿ, ವ್ಯಕ್ತಿವ್ಯಕ್ತಿಗಳನ್ನು ಭಕ್ತಿಯ ಶಕ್ತಿಯಿಂದ ಬಲಿಷ್ಠರನ್ನಾಗಿ, ವಿಶಿಷ್ಟರನ್ನಾಗಿ ಮಾಡಿ, ಅವರ ಜನ್ಮವನ್ನು ಸಾರ್ಥಕ ಮಾಡುವವರೇ ಗುರುಗಳು.

🌷 ದುಷ್ಟಸಂಗ ಬಿಡಿಸಿ, ಸತ್ಸಂಗ ಕೊಡಿಸಿ, ಸನ್ಮಾರ್ಗದಲ್ಲಿ ನಡೆಸಿ, ಭಗವಂತನ ಅನುಗ್ರಹ ಕೊಡಿಸಿ, ಉದ್ಧಾರ ಮಾಡುವವರೇ ಸದ್ಗುರುಗಳು.

🌷 ಪಾಪಕಾರ್ಯಕ್ಕೆ ಮನಸ್ಸು ಬೆಳೆಯದಂತೆ, ಪುಣ್ಯ ಕಾರ್ಯಗಳಲ್ಲಿ ಮನಸ್ಸು ಬೆಳೆಯುವಂತೆ ಉತ್ತಮ ಪ್ರೇರಣೆ ನೀಡಿ ಮುಕ್ತಿಮಾರ್ಗದ ದಾರಿದೀಪವಾಗಿ, ಭಕ್ತಿಮಾರ್ಗದ ಮಹಾಶಕ್ತಿಯಾಗಿ ಶಿಷ್ಯರ ಬದುಕಿನ ಆಧಾರ ಸ್ತಂಭಗಳಾಗುವವರೇ ಗುರುಗಳು.

🌷 ಮನೆಮನೆಯಲ್ಲಿ ತಾಯಿ-ತಂದೆ, ದಂಪತಿಗಳು, ಮಕ್ಕಳು, ದೊಡ್ಡವರು, ಚಿಕ್ಕವರು, ಬಂಧು-ಬಾಂಧವರು ಎಲ್ಲರೂ ಪ್ರೀತಿ-ವಿಶ್ವಾಸಗಳಿಂದ, ಅನ್ಯೋನ್ಯತೆ, ಸೌಹಾರ್ದಗಳಿಂದ ಆದರ್ಶ ಕುಟುಂಬವೆನ್ನುವಂತೆ ಬಾಳಿ ಬದುಕಲು ಬೇಕಾದ ಮೌಲ್ಯಗಳನ್ನು ತಿಳಿಸಿಕೊಡುವವರೇ ಗುರುಗಳು.

🌷 ಜನಸಮುದಾಯದ ಹಾಗೂ ಶಿಷ್ಯರ ಒಳಿತಿಗಾಗಿ, ತಮ್ಮ ಧ್ಯಾನತಪಸ್ಸುಗಳನ್ನು ಧಾರೆಯೆರೆಯುವವರೇ ಗುರುಗಳು.

🌷 ಶಿಷ್ಯಕೋಟಿಯ ಜ್ಞಾನದೀವಿಗೆಯನ್ನು ಬೆಳಗಿಸುವ, ಅಲ್ಲೆಲ್ಲಾ ವಿದ್ಯೆ, ವಿನಯ, ವಿವೇಕದ ವಿಶಿಷ್ಟ ಪಲ್ಲವ ಮಾಡುವ ಶಕ್ತಿಯೇ ಗುರುಗಳು.

🌷 ‘ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ಜಾಗೃತಿಯ ಕಹಳೆಯನ್ನು ಮೊಳಗಿಸುವ ದೇವದುಂದುಭಿಯೇ ಗುರುಗಳು.

🌷 ಧರ್ಮಬೋಧನೆಯ ಮೂಲಕ ಸದಾಕಾಲ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ತಮ್ಮನ್ನೇ ಕೊಟ್ಟುಕೊಂಡ ಮಹಾನುಭಾವರುಗಳೇ ಗುರುಗಳು.

  ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರ ಧ್ಯಾನ ಕ್ರಮ

🌷 ಪ್ರೀತಿ-ಅಭಿಮಾನ, ವಿಶ್ವಾಸಗಳ ಮಹಾಪೂರ ಹರಿಸಿ, ಶಿಷ್ಯಕೋಟಿಯ ಅಂತಃಕರಣವನ್ನು ತೊಳೆದು, ಶುದ್ಧಾತ್ಮರನ್ನಾಗಿಸುವ ಶ್ರೇಷ್ಠ ಶಕ್ತಿಯೇ ಗುರುಗಳು.

🌷 ಸಮಾಜದ ನಿತ್ಯನಿರಂತರ ಆರೋಗ್ಯಕ್ಕೆ ಬೇಕಾದ ಸಂಜೀವಿನಿ ಶಕ್ತಿಯೇ ಗುರುಗಳು.

🌷 ಶಿಷ್ಯಂದಿರಿಗೆ ಧೈರ್ಯ, ಆತ್ಮಸ್ಥೈರ್ಯ ಹಾಗೂ ಅಂತರಂಗದ ಆತ್ಮಶಕ್ತಿಗಳ ಸಂವರ್ಧನೆಗೆ ಅಗತ್ಯವಿರುವ ಎಲ್ಲ ಶಕ್ತಿಯನ್ನೂ ಧಾರೆಯೆರೆಯುವ ಋುಷಿಸಮಾನರೇ ಗುರುಗಳು.

🌷 ಕೋಪ, ಕ್ರೋಧ, ರೋಷ, ದ್ವೇಷ, ಆವೇಶ, ಆಕ್ರೋಶ, ಅಸೂಯೆ, ಅಸಹನೆಗಳಿಲ್ಲದ, ಸಾಧುಂಗೆ ಸಾಧು, ಮಾಧುಯಂರ್‍ಗೆ ಮಾಧುರ್ಯರಾದ, ಎಲ್ಲರನ್ನು ಸಮದೃಷ್ಟಿಯಿಂದ ಪ್ರೀತಿಸುವ, ಶಾಂತ ಪ್ರಶಾಂತ ಭಾವದ, ಭಕ್ತಿಭರಿತ ಭಂಡಾರವಾದ ದೇವರನ್ನು ಮಗುವಿನಂತೆ ಆಡಿಸಬಲ್ಲ, ದೈವೀಸಂಸ್ಕಾರದ, ಋುಷಿಪರಂಪರೆಯ ಮಹಾನುಭಾವರೇ ಗುರುಗಳು.

🌷 ಗುರು ಎಂದರೆ ಬೆಳಕು, ಜ್ಞಾನ, ತೇಜಸ್ಸು. ಅದಕ್ಕೆ ಗುರುಗಳನ್ನು ಜ್ಞಾನಸೂರ್ಯಎನ್ನುವುದು. ಸೂರ್ಯ ಬಂದೊಡನೆಯೇ ಕತ್ತಲೆ ಸಹಜವಾಗಿಯೇ ಕರಗುವಂತೆ, ಗುರುವಿನ ಅನುಗ್ರಹವಾದೊಡನೆಯೇ ಅಜ್ಞಾನ ತಾನಾಗಿಯೇ ನಿವಾರಣೆಯಾಗುತ್ತದೆ. ಸುಜ್ಞಾನ ಫಲಿಸುತ್ತದೆ.

🌷 ಯಾರೊಡನೆ ಮಾತಾಡಿದೊಡನೆಯೇ ಧೈರ್ಯ,ಆತ್ಮಸ್ಥೈರ್ಯ, ಭರವಸೆ, ನಂಬಿಕೆಗಳು ತಾನಾಗಿಯೇ ಬರುವುವೋ ಅವರೇ ಗುರು.

🌷 ಯಾರ ಉಪದೇಶ ಕೇಳಿದರೆ ಆತ್ಮಸುಖದ ಅರಿವಾಗುವುದೋ ಅವರೇ ಗುರು.

🌷 ಯಾರ ಕಣ್ಣಿನಲ್ಲಿ ದಯೆ, ಪ್ರೀತಿ, ಮರುಕ, ಕರುಣೆಯ ಝರಿ ನಿರಂತರ ಹರಿಯುತ್ತಿರುತ್ತದೋ ಅವರೇ ಗುರು.

🌷 ಯಾರ ಸಾನ್ನಿಧ್ಯದಲ್ಲಿ ನಿಸ್ಪೃಹ, ನಿಸ್ವಾರ್ಥ, ನಿಷ್ಕಾಮ ಪ್ರೇಮದ ಪರಿಸರ ನಿರ್ಮಾಣವಾಗುವುದೋ ಅವರೇ ಗುರು.

  ಶಕ್ತಿಶಾಲಿ ಶಿವನ ದೇವಾಲಯಗಳು

🌷 ಆರ್ತರು, ಜಿಜ್ಞಾಸುಗಳು, ಸಾತ್ವಿಕ ಸಜ್ಜನರು, ಜ್ಞಾನಿಗಳು, ಯಾರಲ್ಲಿಗೆ ಹೋದರೆ ಜೀವಕ್ಕೆ ನೆಮ್ಮದಿ, ಬದುಕಿಗೆ ಅರ್ಥ, ಸಾಂತ್ವನ ದೊರಕುವುದೆಂದು ಭಾವಿಸಿ ಧಾವಿಸಿ ಬರುತ್ತಾರೋ, ಅವರೇ ಗುರುಗಳು.

🌷 ಯಾರಿಗೆ ಪ್ರತಿನಿತ್ಯ ಪಾಠ, ಪ್ರವಚನ, ಉಪನ್ಯಾಸ, ಯಜ್ಞಯಾಗ, ಹವನ, ಹೋಮ, ದಾನಧರ್ಮ, ಭಜನೆ, ಸಂಕೀರ್ತನೆ, ಸಂಗೀತ, ಸಾಹಿತ್ಯ, ಸಂಸ್ಕಾರ, ಸಂಸ್ಕೃತಿಗಳಲ್ಲೇ ಮುಳುಗಿಹೋಗಿ ಸುಸಂಸ್ಕೃತ, ಧಾರ್ಮಿಕ ಸಮಾಜದ ನಿರ್ಮಾಣದ ಹಂಬಲವಿರುವುದೋ ಅವರೇ ಗುರುಗಳು.

🌷 ಯಾರ ಸ್ಮರಣೆಯಿಂದಲೇ ಜ್ಞಾನಸತ್ರಗಳು, ದೇವಾಲಯ ಸ್ಥಾಪನೆ, ದೇವತಾ ಸನ್ನಿಧಾನ ನಿರ್ಮಾಣ, ಸಮಾಜಕಲ್ಯಾಣ, ಕಾರ್ಯಕ್ರಮಗಳು ಹೂವು ಎತ್ತಿದಂತೆ ನಡೆದು ಹೋಗುವುದೋ ಅಂತಹವರೇ ಗುರುಗಳು.

🌷 ಯಾರು ಜ್ಞಾನ ಭಕ್ತಿ ವೈರಾಗ್ಯದ ಶೃಂಗದೆಡೆಗೆ ಶಿಷ್ಯರನ್ನು ಕರೆದೊಯ್ಯಬಲ್ಲರೋ ಅವರೇ ಗುರುಗಳು.

🌷 ಮಠಮಾನ್ಯ, ದೇವಾಲಯ, ಆಶ್ರಮ, ಶಾಲೆಗಳನ್ನು ನಿರ್ಮಿಸುತ್ತಾ, ಸಮಾಜದ ಏಳ್ಗೆಗಾಗಿ ನಿರಂತರ ಶ್ರಮಿಸುವವರೇ ಗುರುಗಳು.

🌷 ಆಚಾರ್ಯ, ಶಿಕ್ಷ ಕ, ಅಧ್ಯಾಪಕ, ಉಪಾಧ್ಯಾಯ ಮುಂತಾದ ಹೆಸರುಗಳು ಏನೇ ಇದ್ದರೂ, ತಮ್ಮ ಜ್ಞಾನದ ಜ್ಯೋತಿಯನ್ನು ಹಚ್ಚಿ, ನೂರಾರು ಪರಂಜ್ಯೋತಿಗಳನ್ನು ನಿರ್ಮಿಸುವ ಕ್ರಿಯಾಶಕ್ತಿಗಳೇ ಗುರುಗಳು.

🌷 ತ್ಯಾಗ, ತಪಸ್ಸುಗಳ ತಂಪನ್ನು ಶಿಷ್ಯರಿಗೆ ಧಾರೆಯೆರೆಯುವವರೇ ಗುರುಗಳು.

🌷ಇಂದ್ರಿಯ ವಾಸನೆಯನ್ನು ಅಳಿದು, ಕೋಪ ಕ್ರೋಧಗಳನ್ನು ತುಳಿದು, ಆವೇಶ ಆಕ್ರೋಶಗಳನ್ನು ಕಳೆದು, ಕರ್ಮಬಂಧನವನ್ನು ಕಳಚಿ, ಆಶಾಪಾಶವನ್ನು ತೊರೆದು, ಮಾಯಾಪಾಶವನ್ನು ಹರಿದು, ಶಿಷ್ಯರ ದುಃಖ ಪರಿಹರಿಸುವವರೇ ಗುರುಗಳು.

  ತೆನಾಲಿ ರಾಮನಿಗೆ ದೇವರ ಉಡುಗೊರೆಯ ಕಥೆ

🌷 ಸತ್ವಗುಣದಲ್ಲಿ ನೆಲೆಯೂರಿರುವವರು, ತತ್ವಸಿದ್ಧಾಂತದಲ್ಲಿ ಮುಳುಗಿರುವವರು, ಎಲ್ಲ ಶಿಷ್ಯರನ್ನು ಸಮಾನದೃಷ್ಟಿಯಿಂದ ನೋಡುವವರು, ಭಗವದನುಭವದ ಹೊಳಹು ಸುಳಿವುಗಳನ್ನು ಅದ್ಭುತವಾಗಿ ಕೊಡುವವರೇ ಗುರುಗಳು.

🌷 ಗುರುವೇ ತಾರಕ, ಕಾರಕ, ಪ್ರೇರಕ, ಅರಿವು ಇದರ ಕುರುಹು ಹಾಗೂ ಇರವು. ಚಿಂತನ-ಮಂಥನ ವಿವೇಕಗಳ ಬೆಳಕನ್ನು ನೀಡುವ ಶಕ್ತಿಯೇ ಗುರು. ಒಳಗಣ್ಣಿನ ಒಳಗಿಂದ ಒಳಗೊಳಗೇ ಇಳಿಸುವವನೇ ಗುರು. ಒಳಗಿನ ಬಗೆಯನ್ನು ತಿಳಿಸುವವನೇ ಗುರು. ಬಗೆಗಣ್ಣಿನೊಳಗಿಂದ ಭಗವಂತನ ದರುಶನ ಮಾಡಿಸುವವನೇ ಗುರು. ಜ್ಞಾನವಿಜ್ಞಾನ, ಪ್ರಜ್ಞಾನಗಳನ್ನು ಧಾರೆ ಎರೆವ ನವಚೈತನ್ಯದ ಜಲಪಾತವೇ ಗುರು. ವೇದ ಉಪನಿಷತ್ತುಗಳ ಗಾಢಗೂಢ ಅರ್ಥವನ್ನು, ಸತ್ಯವನ್ನು ಬಿಚ್ಚಿ ತೋರಿಸುವವರೇ ಗುರು. ಇಂದ್ರಿಯಗಳನ್ನು ಬಹಿರ್ಮುಖವಾಗಿ ಹರಿಸದೆ, ಅಂತರ್ಮುಖಿಯಾಗಿ, ಆತ್ಮಜ್ಞಾನಿಯಾಗಿ ಆತ್ಮಸುಖದ ಅನುಭವ ಹೊಂದುತ್ತಿರುವವರೇ ಗುರುಗಳು.

ಇಂತಹ ಗುರುಗಳಲ್ಲಿ ಶಿರಸಾ ನಮಿಸಿ, ವಚಸಾ ಪ್ರಾರ್ಥಿಸಿ, ಸೇವೆ ಮಾಡುವ ಶಿಷ್ಯ ಉದ್ಧಾರವಾಗುತ್ತಾನೆ. ಅಂತಹ ಶಿಷ್ಯರಿಗೆ ಸಂಸ್ಕಾರ, ಸಂಸ್ಕೃತಿ, ಸಮಭಾವ, ಸಂತಸ, ಸಂಭ್ರಮ, ಸಡಗರ, ಸಂತೃಪ್ತಿ, ಸಮೃದ್ಧಿಗಳು ಗುರುವಿನ ಅನುಗ್ರಹದಿಂದ ತಾವಾಗಿಯೇ ಒದಗಿಬರುತ್ತದೆ🙏

Leave a Reply

Your email address will not be published. Required fields are marked *

Translate »