ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅರ್ಜುನನ ಮಗ ಅರವಣನ ಮಹಾಭಾರತದ ಉಪ ಕತೆ

ಅರ್ಜುನನ ಮಗ ಅರವಣ


ಈತ ಅರ್ಜುನನ ಮಗ ಬಹುಷಃ ಅರವಣನ ಬಗ್ಗೆ ಅಷ್ಟಾಗಿ ತಿಳಿದಿರಲಾರದು .‌ಯಾಕೆಂದರೆ ಅರವಣನ ಕತೆ ಮಹಾಭಾರತದ ಉಪ ಕತೆಯಲ್ಲಿ ಬರುತ್ತದೆ . ಅರ್ಜುನನಿಗೆ #ಅಭಿಮನ್ಯು ಮತ್ತು ಬಬ್ರುವಾಹನ ನಲ್ಲದೆ ಅರವಣ ಎಂಬ ಪುತ್ರನೂ ಇದ್ದನೂ ಆದರೆ ಅರವಣನನ್ನು ಯುದ್ದಕ್ಕಾಗಿ ಬಲಿ ಕೊಡಬೇಕಾಯ್ತು ಅರವಣನೂ ಅಭಿಮನ್ಯುವಿನಂತೆ ಮಹಾಭಾರತದ ಯುದ್ದಕ್ಕಾಗಿ ತನ್ನ ಬಲಿದಾನವನ್ನು ಮಾಡಿದ ಮಹಾನ್ ವೀರ .

ಒಮ್ಮೆ ಧರ್ಮರಾಯ ಮತ್ತು ದ್ರೌಪದಿಯರು ಶಯ್ಯಾಗೃಹದಲ್ಲಿದ್ದಾಗ ಅರ್ಜುನ ಗಮನಿಸದೆ ಕೋಣೆಯನ್ನು ಪ್ರವೇಶಿಸುವ ಅಲ್ಲಿ ಧರ್ಮರಾಯ ದ್ರೌಪದಿಯ ಜೊತೆ ಇರುವುದನ್ನು ಕಂಡು ಎಂತಹ ಕೆಲಸ ಮಾಡಿಬಿಟ್ಟೆ ಎಂದು ಮುಜುಗರ ಪಟ್ಟು ಕೊಳ್ಳುತ್ತಾ ಹೊರಬರುತ್ತಾನೆ .

ಧರ್ಮ ಸಂಕಟಕ್ಕೆ ಸಿಲುಕಿದೆನಲ್ಲಾ ಎಂತಹ ಅಚಾತುರ್ಯ ವಾಯ್ತು ಎಂದು ಚಿಂತಿಸುತ್ತಾನೆ . ಪಾಂಡವರಲ್ಲಿ ಒಂದು ಒಪ್ಪಂದ ವಾಗಿರುತ್ತದೆ ದ್ರೌಪದಿಯ ಜೊತೆ ಪಾಂಡವರೆಲ್ಲರೂ ಒಬ್ಬಬ್ಬರಾಗಿ ಇರಬೇಕಾದರೆ ಅವರ ಕೋಣೆಗೆ ಇತರ ಪಾಂಡವರು ಹೋಗಬಾರದು ಎಂದು .

ಮತ್ತು ಕೋಣೆಯೊಳಗೆ ಹೋದಾಗ ಬಾಗಿಲ ಬಳಿ ಪಾದರಕ್ಷೆ ಬಿಡಬೇಕು ಎಂದು ಒಪ್ಪಂದ ವಾಗಿರುತ್ತದೆ . ಅಂದು ಅರ್ಜುನ‌ ದ್ರೌಪದಿಯ ಕೋಣೆಗೆ ಹೋದಾಗ ಬಾಗಿಲ ಬಳಿ ಯಾರ ಪಾದರಕ್ಷೆಯೂ ಇರುವುದಿಲ್ಲ ಅದಕ್ಕಾಗಿಯೇ ಒಳ ಹೋಗಿದ್ದ .

ಧರ್ಮರಾಯನ ಪಾದರಕ್ಷೆ ಒಂದು ನಾಯಿ ಎಳೆದು ಹೊಯ್ದಿರುತ್ತದೆ ಇದರಿಂದ ಅರ್ಜುನ ಒಳಗೆ ಬಂದಿರುವುದ ತಿಳಿದ ದ್ರೌಪದಿ ನಾಯಿಗೆ ಶಾಪ ಕೊಡುತ್ತಾಳೆ .

ಅರ್ಜುನ ತನ್ನ ಧರ್ಮ ಸಂಕಟ ನಿವಾರಿಸಿಕೊಳ್ಳಲು ತೀರ್ಥಯಾತ್ರೆ ಗೆ ಹೋಗುತ್ತಾನೆ . ಒಂದು ಸಾಯಂ ಸಂದ್ಯಾಕಾಲ ಸೂರ್ಯದೇವನ ಪೂಜೆಯನ್ನು ನದೀ ತೀರದಲ್ಲಿ ಮಾಡುತ್ತಿದ್ದಾಗ ನಾಗಲೋಕದ ನಾಗರಾಜನ ಪುತ್ರಿ ನಾಗಕನ್ನಿಕೆ ಯಾದ ಉಲೂಚಿ (ಉಲೂಪಿ ) ಮದ್ಯಮ ಪಾಂಡವನಾದ ಅರ್ಜುನನನ್ನು ಕಂಡು ಮೋಹಿಸುತ್ತಾಳೆ . ಮತ್ತು ಅರ್ಜುನನನ್ನು ನಾಗಲೋಕಕ್ಕೆ ಕೊಂಡೊಯ್ಯುತ್ತಾಳೆ .

ಅರ್ಜುನ ಉಲೂಚಿಯನ್ನು ಕಂಡು ಮೋಹ ಗೊಂಡು ಇಬ್ಬರೂ ಗಾಂದರ್ವ ವಿವಾಹ ಮಾಡಿಕೊಳ್ಳುತ್ತಾರೆ . ಅವರಿಬ್ಬರಿಗೂ ಜನಿಸಿದ ಪುತ್ರನೇ #ಅರವಣ .

#ಮಹಾಭಾರತದ ಯುದ್ದ ಪ್ರಾರಂಭ ವಾಗಿರುತ್ತದೆ . ಆಗ ಕೃಷ್ಣ ಯುದ್ದವನ್ನು ಗೆಲ್ಲಬೇಕಾದರೆ ಪಾಂಡವರಲ್ಲೊಬ್ಬರನ್ನು ಅದು ಮೈ ಮೇಲಿನ‌ರೋಮಗಳು ಮೇಲೆ ಎದ್ದಿರ ಅಂತಹ ಪಾಂಡವ ಬೇಕು ಅವರನ್ನು ಬಲಿ ಕೊಟ್ಟರೆ ಯುದ್ದದಲ್ಲಿ ಗೆಲುವು ಸಾದ್ಯ ಎಂದು ಹೇಳುತ್ತಾನೆ .

ಅಂತಹ ಪುರುಷರಲ್ಲಿ ಅರ್ಜುನ ಇದ್ದರೆ ಅರ್ಜುನನೇ ಯುದ್ದದ ಮುಖ್ಯ ಪಾತ್ರ ಇನ್ನು ಧರ್ಮರಾಯ ಹಿರಿಯ ಯಾರನ್ನು ಬಲಿ ಕೊಡಬೇಕು ಎಂದು ಚಿಂತಿಸುತ್ತಿರುವಾಗ ಅರ್ಜುನನ ಮಗ #ಅರವಣ ನಾನು ಬಲಿಗೆ ಆಹುತಿ ಯಾಗುತ್ತೇನೆ ಎಂದು ಮುಂದೆ ಬಂದನು .

ಆದರೆ ನನ್ನ ಕಡೆಯ ಆಸೆಯನ್ನು ಈಡೇರಿಸಿದರೆ ಮಾತ್ರ ಎಂದನು . ಕೃಷ್ಣನು ಅರವಣ ನಿನ್ನ ಅಭಿಮತ ವೇನು ತಿಳಿಸು ಎಂದಾಗ ಅರವಣ ಕೃಷ್ಣನಿಗೆ …. ನಾನು ಬಲಿಗೆ ಮೊದಲು ಮದುವೆಯಾಗ ಬೇಕು ನಂತರ ಮೊದಲ ರಾತ್ರಿಯ ರಸ ಗಳಿಗೆಯನ್ನು ಅನುಭವಿಸಬೇಕು ಇದೇ ನನ್ನ ಅಂತಿಮ ಆಸೆ ಅಂದಾಗ .

ಕೃಷ್ಣ ಮತ್ತು ಪಾಂಡವರು ಒಪ್ಪುವರು . ಆದರೆ ದುರದೃಷ್ಟಕರ ಯಾವೊಂದು ಹೆಣ್ಣೂ ಅರವಣನನ್ನು ಮದುವೆ ಯಾಗಲು ಮುಂದೆ ಬರುವುದಿಲ್ಲ . ಮದುವೆಯ ಮಾರನೆಯ ದಿನ ಬಲಿಯಾಗುವ ಪುರುಷ ನಮಗೆ ಬೇಡ ಎಂದವರೇ ಎಲ್ಲರು .

ಈಗಿರುವಾಗ ಕೃಷ್ಣ ಚಿಂತಿಸಿ ಕೊನೆಗೆ ತಾನೇ ಸ್ವಯಂ ಮೋಹಿನಿಯ ರೂಪದರಿಸುತ್ತಾನೆ . ಮೋಹಿನಿಯನ್ನು ಕಂಡ ಅರವಣ ಆಕೆಯನ್ನು ಮೋಹಿಸುತ್ತಾನೆ ಮದುವೆಯಾಗಿ ತನ್ನ ಆಸೆ ಪೂರೈಸಿ ಕೊಳ್ಳುತ್ತಾನೆ .

ನಂತರ ಮಾರನೆಯ ದಿನ ಅರವಣನನ್ನು ಯುದ್ದ ಜಯಿಸಲಿಕ್ಕಾಗಿ ಬಲಿಯನ್ನು ಕೊಡುತ್ತಾರೆ . ಅರವಣನ ಈ ತ್ಯಾಗ ಬಲಿದಾನಕ್ಕೆ ಮೆಚ್ಚಿದ ಕೃಷ್ಣ ಅರವಣನನ್ನು ಹರಸಿ ಸೂರ್ಯ ಚಂದ್ರ ರಿರುವ ತನಕ ನಿನ್ನ ಹೆಸರು ಶಾಶ್ವತ ವಾಗಿರಲಿ ಎಂದು ವರ ವನ್ನು ಕೊಡುತ್ತಾನೆ . ಈ ಕತೆ ಮಹಾಭಾರತದ ಉಪಕತೆಯಲ್ಲಿ ಉಲ್ಲೇಖ ವಾಗಿದೆ .

ಇಂದಿಗೂ ಸಹ ಅರವಣನ ದೇವಸ್ಥಾನ ವಿದೆ ಅರವಣನ ಉತ್ಸವವನ್ನು ಮಾಡುತ್ತಾರೆ .

ಕೃಷ್ಣ ಮೋಹಿನಿ ಅವತಾರ ವೆತ್ತಿ‌ ಅರವಣನನ್ನು ವಿವಾಹವಾಗಿ ಮಾರನೆಯ ದಿನ ವಿಧವೆಯಾಗುತ್ತಾಳೆ . ಆದ ಕಾರಣ ಇಂದಿಗೂ ಸಹ ಮಂಗಳ ಮುಖಿಯರು ಅರವಣನ ಉತ್ಸವ ಮಾಡುತ್ತಾರೆ .

#ಅರವಣನ ದೇವಸ್ಥಾನ ತಮಿಳಿನಾಡಿನ ಪೋತಾಂಡ ಪುರ್ ನಲ್ಲಿದೆ
ಪ್ರತೀವರ್ಷ ಚೈತ್ರ ಮಾಸದಂದು ದೇಶದಲ್ಲಿರುವ ಸಾವಿರಾರು ಮಂಗಳ ಮುಖಿಯರು ಪೋತಾಂಡಪುರ್ ದೇವಸ್ಥಾನ ಕ್ಕೆ ಹೋಗಿ ಅರವಣನ ಉತ್ಸವ ವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ .
ಕೃಷ್ಣ‌ಮೋಹಿನಿ ರೂಪ ದರಿಸಿದ್ದರಿಂದ ಕೃಷ್ಣನನ್ನು ಪೂಜಿಸುತ್ತಾರೆ.
ಮಂಗಳ ಮುಖಿಯರೆಲ್ಲಾ ಮದುವಣಗಿತ್ತಿಯಂತೆ ಅಲಂಕರಿಸಿಕೊಳ್ಳುವರು ಅವರಿಗೆಲ್ಲ ಪೂಜಾರಿಯೇ ತಾಳಿ
ಕಟ್ಟುವ ಹತ್ತು ದಿನಗಳ ಕಾಲ‌ ಉತ್ಸವ ನಡೆಯುತ್ತದೆ .

ಹತ್ತುದಿನದ ನಂತರ ಮಂಗಳ ಮುಖಿಯರು ಕೈ ಬಳೆ ಹೊಡೆದು ಅಳುತ್ತಾರೆ . ಇಂದಿಗೂ ಸಹ ಚೈತ್ರ ಮಾಸದಲ್ಲಿ ಅರವಣನ ಉತ್ಸವ ನಡೆಯುತ್ತದೆ .‌

ಧನ್ಯವಾದಗಳು

ಲೇಖಕರು

✒✒ಮಮತಾ ಎಸ್‌‌ ಗೌಡ

Leave a Reply

Your email address will not be published. Required fields are marked *

Translate »