ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೀಪಾವಳಿ ಹಾಗು ಬಲಿ ಪಾಡ್ಯಮಿ

” ಬಲಿ ಪಾಡ್ಯಮಿ “
————————–
ಕಾರ್ತಿಕ ಮಾಸದಶುಕ್ಲ ಪಕ್ಷ ಪಾಡ್ಯ” ಬಲಿ ಪಾಡ್ಯಮಿ ” ಆಚರಿಸಲಾಗುತ್ತಿದೆ.
ದೀಪಾವಳಿ ಅಮವಾಸ್ಯ ಮರುದಿನ ಬರುವ ಈ ಪಾಡ್ಯ ಬಹಳ ವೈಶಿಷ್ಟ್ಯ ಪಡೆದಿದೆ.
ಬಲಿ ಚಕ್ರವರ್ತಿ ವಿಷ್ಣುವಿನ ಪರಮ ಭಕ್ತನಾದ ” ಪ್ರಲ್ಹಾದ ಚಕ್ರವರ್ತಿಯ ” ಮೊಮ್ಮಗ.
ಬಲಿಯ ತ್ಯಾಗವನ್ನು ಕೊಂಡಾಡುವ ಹಬ್ಬ ಬಲಿಪಾಡ್ಯಮಿ.
ಭಗವಂತ ವಾಮನ ರೂಪದಲ್ಲಿ ಅವತರಿಸಿ,
ಬಲಿ ಚಕ್ರವರ್ತಿ ಗೆ ” ” ಓಂ ಭವತಿ ಭಿಕ್ಷಾಂದೇಹಿ”
ಎಂದು ವಾಮನನ್ನು ಕೇಳುತ್ತಾನೆ.
ಆಗಲಿ ಏನು ಬೇಕು ಎಂದು ಕೇಳಿದಾಗ ,
ವಾಮನನು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು.ಆಗಲಿ ಎಂದು ಬಲಿ ಹೇಳುತ್ತಾನೆ.
ವಾಮನನು ವಿರಾಟ ರೂಪ ತಾಳಿ ಒಂದು ಪಾದವನ್ನು ಭೂಮಿಯ ಮೇಲಿಡತ್ತಾನೆ.
ಎರಡನೆಯ ಪಾದವನ್ನು ಅಂತರಿಕ್ಷದಲ್ಲಿ ಇಡುತ್ತಾನೆ.

  ಅನಂತ ಚತುರ್ದಶಿ : ಇಲ್ಲಿದೆ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನ ಮತ್ತು ಆಚರಣೆಯ ಕಾರಣ..

ಭೂಮಿ ಆಕಾಶ ಎಲ್ಲವೂ ಭಗವಂತನಿಂದ ಆವೃತವಾಗುತ್ತದೆ.ಮೂರನೆಯ ಪಾದವನ್ನು ಎಲ್ಲಿಡಲಿ ಎಂದು ಬಲಿಯನ್ನು ಕೇಳಿದಾಗ- ತನ್ನ ಶಿರದ ಮೇಲಿಡಿ ಎಂದು ಹೇಳುತ್ತಾನೆ.ಆಗಲಿ ನಿನ್ನ ಕೊನೆಯ ಇಚ್ಛೆಯನ್ನು
ತಿಳಿಸು ಎಂದು ಮಹಾವಿಷ್ಣು ಕೇಳಿದಾಗ ” ಮೂರುದಿನಗಳ ಕಾಲ ಭೂಲೋಕದಲ್ಲಿ ನನ್ನನ್ನು ಗುರುತಿಸಲ್ಪಡಲಿ, ದೀಪದಾನ ಮಾಡಲಿ.
ದೀಪದಾನ ಮಾಡುವವರಿಗೆ ಅಪಮೃತ್ಯು ಬರದಿರಲಿ.

ಲಕ್ಷ್ಮೀಯು ಅವರ ಮನೆಯಲ್ಲಿ ನೆಲೆಸಲು ಎಂದು ಪ್ರಾರ್ಥಿಸುತ್ತಾನೆ.
ಅಶ್ವಯುಜ ಚತುರ್ದಶಿ , ಅಮವಾಸ್ಯ,.ಕಾರ್ತಿಕ ಶುಕ್ಲಪಾಡ್ಯ .ಇವೇ ಆಮೂರು ದಿನಗಳು.

ಇದಕ್ಕೆ ” ಬಲಿರಾಜ್ಯ ” ವೆನ್ನುತ್ತಾರೆ.
ಕಾರ್ತಿಕ ಶುಕ್ಲ ಪಾಡ್ಯ ಮೂರುವರೆ ಮುಹೂರ್ತ ವಾಗಿದೆ, ಶ್ರೇಷ್ಟ ಮೂಹೂರ್ತವಾಗಿದೆ.
ವಿಕ್ರಮ ಸಂವತ್ಸರ ಪ್ರಕಾರ ವರ್ಷದ ಮೊದಲದಿನ.
ಎಲ್ಲಾ ವ್ಯವಹಾರ ವಹಿವಾಟಗಳು ಪ್ರಾರಂಭಿಸುತ್ತಾರೆ.

  ಶುಕ್ರವಾರ ಕ್ಷೌರ ನಿಷಿದ್ಧ ಏಕೆ ?

ಯಾವುದೇ ಶುಭ ಕಾರ್ಯ ಮಾಡಿದರೂ ಶುಭ ಫಲನೀಡುತ್ತದೆ.
ಬಲಿಯು ಅಸುರನಾದರೂ ಅವನಲ್ಲಿರುವ ಈಶ್ವರಿ ಕಾರ್ಯಗಳನ್ನು ಮೆಚ್ಚಿ ಮಹಾವಿಷ್ಣುವಿನ
ಪ್ರೀತಿಗೆಪಾತ್ರನಾಗುತ್ತಾನೆ.

ಭೂಲೋಕದಲ್ಲಿ ಅಮರನಾದನು.
ಭೂಲೋಕದಲ್ಲಿ ಪ್ರತಿವರ್ಷ ಬಲಿಯನ್ನು ನೆನೆಯುತ್ತಾ ” ದೀಪಾವಳಿ ” ಆಚರಿಸುವದು
ರೂಡಿಯಲ್ಲಿ ಬಂದಿದೆ.
” ದೀಪಾವಳಿ ಹಾಗು ಬಲಿ ಪಾಡ್ಯಮಿ ಯ ಶುಭಾಶಯಗಳು ”

Leave a Reply

Your email address will not be published. Required fields are marked *

Translate »