ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹಾಭಾರತದಲ್ಲಿ ಪಾಂಡವರ ಸಾವಿನ ಐದು ಚಿನ್ನದ ಬಾಣಗಳ ಕಥೆ

ಪಾಂಡವರು ಮತ್ತು ಕೌರವರ ನಡುವಿನ ಯುದ್ಧದಲ್ಲಿ ದುರ್ಯೋಧನನು , ತನ್ನ ಸೋಲು ಖಚಿತವಾಗಿದೆ ಎಂದು ಭಾವಿಸಿದನು. ರಾತ್ರಿ ಭೀಷ್ಮನನ್ನು ಭೇಟಿಯಾಗಿ ಹೇಳಿದನು ” ತಾವು ತಮ್ಮ ಸಂಪೂರ್ಣ ಶಕ್ತಿಯಿಂದ ಯುದ್ಧ ಮಾಡುತ್ತಿಲ್ಲ , ಹಾಗಾಗಿ ಪಾಂಡವರು ಗೆಲ್ಲುವ ಹಾದಿಯಲ್ಲಿದ್ದಾರೆ ” ಎಂದು ಆರೋಪಿಸಿದನು. ಆದ್ದರಿಂದ ಭೀಷ್ಮ ಯಾವಾಗಲೂ ಭಾಗಶಃ ಪಾಂಡವರ ಕಡೆಗೆ ಎಂದು ದೂಷಿಸಿದನು. ಆದರೆ ಭೀಷ್ಮಾ ಈ ರೀತಿಯ ಅವಮಾನವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿ , ಕೂಡಲೇ ಅವರು ತನ್ನ ಕಣ್ಣು ಮುಚ್ಚಿ ಕೆಲವು ಮಂತ್ರಗಳನ್ನು ಪಠಿಸಿದರು, ತಮ್ಮ ಎಲ್ಲ ಶಕ್ತಿಯನ್ನು ಧಾರೆ ಎರೆದು ತಕ್ಷಣವೇ ಐದು ಚಿನ್ನದ ಬಾಣಗಳನ್ನು ಸೃಷ್ಟಿಸಿದರು.

ಐದು ಚಿನ್ನದ ಬಾಣಗಳು

ದುರ್ಯೋಧನನು ಅದರ ಬಗ್ಗೆ ಕೇಳಿದಾಗ, ಭೀಷ್ಮಾನು ತನ್ನ ಕಣ್ಣುಗಳನ್ನು ತೆರೆದು “ನನ್ನ ಜೀವ ಶಕ್ತಿ ಇದರಲ್ಲಿದೆ , ಈ ಬಾಣಗಳಲ್ಲಿ ನಾನು ಸ್ವೀಕರಿಸಿದ ಶಕ್ತಿಗಳು ಅಡಗಿವೆ , ಈ ಐದು ಚಿನ್ನದ ಬಾಣಗಳಿಂದ ನಾಳೆ ಯುದ್ಧದಲ್ಲಿ ನಾನು ಐದು ಪಾಂಡರನ್ನು ಕೊಲ್ಲುತ್ತೇನೆ. ಈ ಬಾಣಗಳಿಂದ ತಪ್ಪಿಸಿಕೊಳ್ಳಲು ಯಾರು ಸಾಧ್ಯವಿಲ್ಲ. ” ಎಂದರು. ಈ ಪದಗಳನ್ನು ಕೇಳಲು ದುರ್ಯೋಧನನಿಗೆ ಸಂತಸವಾಯಿತು. ಮರುದಿನ ತನಕ ಅವಗಳನ್ನೂ ಸುರಕ್ಷಿತವಾಗಿ ಇಡಲು ದುರ್ಯೋಧನ ಭೀಷ್ಮಾನನ್ನು ನಂಬಲಿಲ್ಲ. ಪಾಂಡವರಿಗಾಗಿ ಅವರ ಮೇಲಿನ ಪ್ರೀತಿಯಿಂದ ಈ ಬಾಣಗಳನ್ನು ಕಳೆದುಕೊಳ್ಳುತ್ತಾರೆ ಅಥವಾ ಅವರಿಗೆ ನೀಡುತ್ತಾರೆಂದು ಭಾವಿಸಿದನು. ಆದ್ದರಿಂದ ಆ ೫ ಚಿನ್ನದ ಬಾಣಗಳನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು ನಾಳೆ ಕೊಡುತ್ತೇನೆ ಎಂದು ತೆಗೆದು ಕೊಂಡು ಹೋದನು.

  ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ - ಆಟದ ಹಿನ್ನಲೆ ಕಥೆ

ಜೀವನವು ನಿಗೂಢ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅಲ್ಲವೇ? ಆ ಬಾಣಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ದುರ್ಯೋಧನನು ಭೀಷ್ಮಾನನ್ನು ನಂಬಿದ್ದರೇ , ಬಹುಶಃ, ಮುಂದಿನ ದಿನ ಯುದ್ಧವು ಪಾಂಡವರಿಗೆ ಸಾವಾಗಿ ಕೊನೆಗೊಳ್ಳ್ಳುತ್ತಿತ್ತು , ಆದರೆ ಹಾಗಾಗಲಿಲ್ಲ.

ಕೃಷ್ಣ ಪರಮಾತ್ಮನು ತನ್ನ ಶಕ್ತಿಗಳಿಂದ ಎಡಿಎ ಘಟನೆಗಳೆಲ್ಲವನ್ನು ತಿಳಿದುಕೊಂಡನು. ದುರ್ಯೋಧನನು ಬಾಣಗಳನ್ನು ತನ್ನ ಶಿಬಿರಕ್ಕೆ ತೆಗೆದುಕೊಂಡು ಹೋಗಿದ್ದು ಒಳೆಯದಾಯಿತು , ತನ್ನ ಕೆಲಸ ಸುಲಭವಾಯಿತು ಎಂದು ನಕ್ಕನು.

ಅರ್ಜುನ ದುರ್ಯೋಧನನ ಭೇಟಿ

ದುರ್ಯೋಧನನು ತನ್ನ ಶಿಬಿರದಲ್ಲಿ ಎಚ್ಚರಗೊಂಡಿದ್ದನು. ಅವರು ಪ್ರೀತಿಯಿಂದ ಆ ಐದು ಚಿನ್ನದ ಬಾಣಗಳನ್ನು ಸ್ಪರ್ಶಿಸುತ್ತಿದ್ದನು. ಆ ಕ್ಷಣಕ್ಕೆ , ಒಂದು ಮೊನಚಾದ ವ್ಯಕ್ತಿ ಶಿಬಿರದ ಒಳ ಪ್ರವೇಶಿಸಿದರು. ಇದು ಅರ್ಜುನನನ್ನು ಹೊರತುಪಡಿಸಿ ಬೇರೆ ಯಾರೂ ಅಲ್ಲ ಎಂದು ದುರ್ಯೋಧನನಿಗೆ ಗೊತ್ತಾಯಿತು. ಅವನು ಏಕೆ ಅಂದ್ದಿದ್ದಾನೆ ಎಂದು ಕೂಡ ದುರ್ಯೋಧನನಿಗೆ ಸಹಜವಾಗಿ ತಿಳಿದಿದೆ. ಆದರೂ, “ನೀವು ಈಗ ನನ್ನನ್ನು ಭೇಟಿ ಮಾಡಲು ಯಾಕೆ ಬಂದೆ ?” ಎಂದು ಕೇಳಿದನು. ಅರ್ಜುನನು ತನ್ನ ಮುಖದ ಮೇಲೆ ಶಾಂತವಾದ ನಗುವನ್ನು ಹೊಂದಿದ್ದನು. ಅವನು ಮೆದುವಾಗಿ ಮಾತನಾಡಿ, “ನೀನು ನನಗೆ ಹಿಂದೊಮ್ಮೆ ಭರವಸೆ ನೀಡಿದ್ದ ವರವನ್ನು ತೆಗೆದುಕೇಳಲು ಬಂದಿದ್ದೇನೆ.” ಎಂದು ಹೇಳಿದ.

  ಬ್ರಾಹ್ಮೀ ಮುಹೂರ್ತ

ವರದ ಹಿಂದಿನ ಕಥೆ

ಈ ವರವನ್ನು ಅನಿವಾರ್ಯವಾಗಿ ಕೊಡಮಾಡಿದ ಸಂದರ್ಭವನ್ನು ನೆನಪಿಸಿದಾಗ ದುರ್ಯೋಧನನು ಉತ್ತರವಿಲ್ಲದೆ ಗಾಢ ಮೌನವಾದನು. ಒಮ್ಮೆ ಪಾಂಡವರು ಕಾಡಿನಲ್ಲಿ ವಾಸಿಸುತ್ತಿದ್ದರು. ದುರ್ಯೋಧನನು ಕೊಳದ ಇನ್ನೊಂದು ಭಾಗದಲ್ಲಿ ಶ್ರೀಮಂತ ಶಿಬಿರವನ್ನು ಸ್ಥಾಪಿಸಿದನು,ವಾಸಿಸುತ್ತಿದ್ದನು. ಎಂದೆಂದಿಗೂ ಜಗಳವಾಡುವ ದುರ್ಯೋಧನನು, ಅಂದು ಕೊಳದಲ್ಲಿ ಸ್ನಾನ ಮಾಡಲು ಬಂದನು ಗಂಧರ್ವನ (ಸ್ವರ್ಗೀಯ ಜೀವಿ) ಜತೆಗಿನ ಹೋರಾಟದಲ್ಲಿ ಸೋತು ವಶವಾದನು. ಹಿರಿಯ ಸಹೋದರ ಯುಧಿಷ್ಠೀರನ ಕೋರಿಕೆಯ ಮೇರೆಗೆ ಅರ್ಜುನನು ದುರ್ಯೋಧನನನ್ನು ಉಳಿಸಿದನು. ಸಂಕಟದಲ್ಲಿ ತಲೆತಗ್ಗಿಸಿದ ದುರ್ಯೋಧನನು ಅರ್ಜುನನಿಗೆ ಕೇಳಿದಾಗ ಕೇಳಿದ್ದು ಕೊಡುವ ವರವನ್ನು ಕೊಟ್ಟನು. ಅರ್ಜುನನು ಮುಂದೊಮ್ಮೆ ವರವನ್ನು ಕೇಳುತ್ತೇನೆ ಎಂದು ಹೇಳಿದನು.

ಐದು ಚಿನ್ನದ ಬಾಣಗಳು

ಅರ್ಜುನನು ತನ್ನ ವರವನ್ನು ನೆನಪಿಸುತ್ತ , ಈಗ ಆ ವರವನ್ನು ಕೇಳಲು ಬಂದಿದ್ದನು. ಅರ್ಜುನನು ಐದು ಬಾಣಗಳನ್ನು ತೋರಿಸುತ್ತ ಮತ್ತು “ನಾನು ಅವುಗಳನ್ನು ಬಯಸುತ್ತೇನೆ” ಎಂದು ತನ್ನ ಇಚ್ಛೆ ವ್ಯಕ್ತಪಡಿಸಿದನು. ದುರ್ಯೋಧನನು ಒಂದು ಕ್ಷಣವೂ ಮಾತಿಲ್ಲದೆ. ತಾನು ಕೊಟ್ಟ ಮಾತನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದೆಂದು ತಿಳಿದು , ಅರ್ಜುನನಿಗೆ ಬಾಣಗಳನ್ನು ಹಸ್ತಾಂತರಿಸಿದನು. ಅರ್ಜುನನಿಗೆ, “ಈ ಬಾಣಗಳ ಬಗ್ಗೆ ನಿಮಗೆ ಹೇಗೆ ಗೊತ್ತಿದೆ? ಯಾರು ನಿನ್ನ ಬಳಿಗೆ ಹೇಳಿದರು?” ಎಂದು ದುರ್ಯೋಧನ ಕೇಳಿದಾಗ ಅರ್ಜುನ, ” ಎಲ್ಲದಕ್ಕೂ ಕಾರಣನು ಶ್ರೀ ಕೃಷ್ಣ ಪರಮಾತ್ಮನು” ಎಂದು ಉತ್ತರಿಸಿದನು.

  ಪ್ರಜಾಕೀಯಾ - ಸರ್ಕಾರಿ ವಿಧ್ಯಾಭ್ಯಾಸ ವ್ಯವಸ್ಥೆ

ಐದು ಚಿನ್ನದ ಬಾಣಗಳು

ಭಗವಾನ್ ಕೃಷ್ಣನು ಪಾಂಡವರ ಬದಿಯಲ್ಲಿದ್ದರೆ, ದುರ್ಯೋಧನನಿಗೆ ಯುದ್ಧವನ್ನು ಗೆಲ್ಲುವ ಭರವಸೆ ಇರಲಿಲ್ಲ. ಆ ರಾತ್ರಿ ಮತ್ತೊಮ್ಮೆ ಭೀಶ್ಮಾರ ಶಿಬಿರಕ್ಕೆ ಮುಖಾಮುಖಿಯಾಗಿ ಮಾತಾಡಲು ಹೋದನು. ಅವನು ಭೀಷ್ಮಾನಿಗೆ ನಡೆದೆಲ್ಲವನ್ನು ಹೇಳಿ , ಪಾಂಡವರನ್ನು ಕೊಲ್ಲಲು ಮತ್ತೊಂದು ಬಾಣಗಳನ್ನು ಮಾಡಲು ಕೋರಿದನು. ಭೀಶ್ಮಾ ಅವು ಸಾಧ್ಯವಾಗುವುದಿಲ್ಲ ಎಂದು ಹೇಳಿದರು, “ನಾನು ಹೊಂದಿದ್ದ ಎಲ್ಲಾ ಶಕ್ತಿಯಿಂದ ಮತ್ತು ನನ್ನಲ್ಲಿನ ಜೀವಂತ ಶಕ್ತಿಯಿಂದ ನಾನು ಆ ಬಾಣಗಳನ್ನು ಮಾಡಿದ್ದೇನೆ, ನಾನು ಬಯಸಿದ್ದರೂ, ಈಗ ಬಾಣಗಳೊಳಗೆ ತುಂಬಲು ಯಾವುದೇ ಶಕ್ತಿಯನ್ನು ನಾನು ಹೊಂದಿಲ್ಲ” ಎಂದು ಹೇಳಿದರು.
ಪಿತಾಮಹಾ ಭೀಷ್ಮಾ ಸತ್ಯವನ್ನು ಹೇಳುತ್ತಿದ್ದಾನೆ ಎಂದು ದುರ್ಯೋಧನನಿಗೆ ತಿಳಿದಿತ್ತು. ಶ್ರೀಕೃಷ್ಣ ಮಾಯಾ ಆಟಕ್ಕೆ ಅವನು ತಲೆಬಾಗಿದನು.

Leave a Reply

Your email address will not be published. Required fields are marked *

Translate »